ಜರ್ಮನಿಯಲ್ಲಿ ವಲಸಿಗರಿಂದ ಭಾರತೀಯನ ಹತ್ಯೆ!

ಜರ್ಮನಿಯಲ್ಲಿ ಅಲ್ಲಿನ ವಲಸಿಗರೇ ಭಾರತೀಯ ವ್ಯಕ್ತಿಯನ್ನು ಇರಿದು ಹತ್ಯೆ ಮಾಡಿದ್ದಾರೆ. ಈ ಮಾಹಿತಿಯನ್ನು ಸ್ವತಃ ವಿದೇಶಾಂಗ ಸಚಿವರಾದ ಸುಷ್ಮಾ ಸ್ವರಾಜ್ ಸ್ಪಷ್ಟಪಡಿಸಿದ್ದಾರೆ.
ಜರ್ಮನಿಯಲ್ಲಿ ವಲಸಿಗರಿಂದ ಭಾರತೀಯನ ಹತ್ಯೆ!
ಜರ್ಮನಿಯಲ್ಲಿ ವಲಸಿಗರಿಂದ ಭಾರತೀಯನ ಹತ್ಯೆ!
ನವದೆಹಲಿ: ಜರ್ಮನಿಯಲ್ಲಿ ಅಲ್ಲಿನ ವಲಸಿಗರೇ ಭಾರತೀಯ ವ್ಯಕ್ತಿಯನ್ನು ಇರಿದು ಹತ್ಯೆ ಮಾಡಿದ್ದಾರೆ. ಈ ಮಾಹಿತಿಯನ್ನು ಸ್ವತಃ ವಿದೇಶಾಂಗ ಸಚಿವರಾದ ಸುಷ್ಮಾ ಸ್ವರಾಜ್ ಸ್ಪಷ್ಟಪಡಿಸಿದ್ದಾರೆ. 
ಜರ್ಮನಿಯ ಮುನಿಚ್ ನಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಗಾಯಗೊಂಡಿದ್ದ ಮೃತನ ಪತ್ನಿ ಸ್ಮಿತಾ ಬಸ್ರೂರು ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. 
ಹಲ್ಲೆಯಲ್ಲಿ ಗಾಯಗೊಂಡು ಮೃತಪಟ್ಟ ವ್ಯಕ್ತಿಯನ್ನು ಪ್ರಶಾಂತ್ ಬಸ್ರೂರು ಎಂದು ಗುರುತಿಸಲಾಗಿದೆ. ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿರುವ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್, ಭಾರತೀಯ ದಂಪತಿ ಪ್ರಶಾಂತ್ ಹಾಗೂ ಸ್ಮಿತಾ ಬಸ್ರೂರು ಮುನಿಚ್ ಬಳಿ ವಲಸಿಗನೊಬ್ಬ ಇರಿದಿದ್ದಾನೆ, ದುರದೃಷ್ಟವಶಾತ್ ಪ್ರಶಾಂತ್ ಮೃತಪಟ್ಟಿದ್ದಾರೆ. ಸ್ಮಿತಾ ಆರೋಗ್ಯ ಸ್ಥಿರವಾಗಿದೆ, ಪ್ರಶಾಂತ್ ಸಹೋದರನಿಗೆ ಜರ್ಮನಿಗೆ ತೆರಳಲು ವ್ಯವಸ್ಥೆ ಮಾಡಲಾಗುತ್ತಿದೆ. ಮೃತರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ. 
ಭಾರತದ ದಂಪತಿಗೆ ಸಾಕ್ಷಿ ಹಾಗೂ ಶ್ಲೋಕ್ ಎಂಬ ಇಬ್ಬರು ಮಕ್ಕಳಿದ್ದು ಜರ್ಮನಿಯ ಭಾರತೀಯ ಮಿಷನ್ ಕಚೇರಿಯಲ್ಲಿ ಆಶ್ರಯ ನೀಡಲಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಾಗಿದ್ದ ಪ್ರಶಾಂತ್ ಮತ್ತು ಸ್ಮಿತಾ, 2016 ರಲ್ಲಿ ಜರ್ಮನಿಗೆ ತೆರಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com