ಅಂತೆಯೇ ಒಡಿಶಾದ 11 ಜಿಲ್ಲೆಗಳಲ್ಲಿ 880ಕ್ಕೂ ಹೆಚ್ಚು ನಿರಾಶ್ರಿತ ಶಿಬಿರಗಳ ಸ್ಥಾಪನೆ ಮಾಡಲಾಗಿದ್ದು, ಲಕ್ಷಾಂತರ ಜನರನ್ನು ಇಲ್ಲಿಗೆ ಸ್ಥಳಾಂತರಿಸಲಾಗಿದೆ. ಸಂತ್ರಸ್ತರ ರಕ್ಷಣೆಗೆ ನೌಕಾಪಡೆ, ಸೇನೆಯ ಹೆಲಿಕಾಪ್ಟರ್ ಗಳು, ನೌಕಾಪಡೆಯ ನೌಕೆಗಳನ್ನು ನಿಯೋಜನೆ ಮಾಡಲಾಗಿದ್ದು, ನೌಕೆಗಳು ಸರ್ವಸನ್ನದ್ಧ ಸ್ಥಿತಿಯಲ್ಲಿವೆ. ಅಂತೆಯೇ ಪರಿಹಾರ ಸಾಮಗ್ರಿ ವಿತರಣೆಗೆ 2 ಚೇತಕ್ ಕಾಪ್ಟರ್ ಗಳನ್ನೂ ನಿಯೋಜಿಸಲಾಗಿದೆ. ಭುವನೇಶ್ವರದ ರೆಡ್ ಕ್ರಾಸ್ ಭವನದಲ್ಲಿ ಪರಿಹಾರ ಸಾಮಗ್ರಿಗಳ ಸಂಗ್ರಹಿಸಲಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಒಎನ್ಜಿಸಿಯಿಂದ ಬಂಗಾಳಕೊಲ್ಲಿಯಲ್ಲಿರುವ ತೈಲ ಘಟಕಗಳಿಂದ 500 ಸಿಬ್ಬಂದಿಯ ಸ್ಥಳಾಂತರಿಸಲಾಗಿದೆ