ಫೋನಿ ಚಂಡಮಾರುತ: ಭುವನೇಶ್ವರದಿಂದ ಬೆಂಗಳೂರಿಗೆ ವಿಶೇಷ ರೈಲು

ಫೋನಿ ಚಂಡಮಾರುತದ ತತ್ತರಿಸಿರುವ ಒಡಿಶಾದಿಂದ ಬೆಂಗಳೂರಿಗೆ ಬರುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಭಾರತೀಯ ರೇಲ್ವೆ ಭುವನೇಶ್ವರಿಂದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಭುವನೇಶ್ವರ್: ಫೋನಿ ಚಂಡಮಾರುತದ ತತ್ತರಿಸಿರುವ ಒಡಿಶಾದಿಂದ ಬೆಂಗಳೂರಿಗೆ ಬರುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಭಾರತೀಯ ರೇಲ್ವೆ ಭುವನೇಶ್ವರಿಂದ ಬೆಂಗಳೂರಿಗೆ ವಿಶೇಷ ರೈಲಿನ ವ್ಯವಸ್ಥೆ ಮಾಡಿದೆ.
ಈ ವಿಶೇಷ ರೈಲು ಇಂದು ಸಂಜೆ 7 ಗಂಟೆಗೆ ಭುವನೇಶ್ವರದಿಂದ ಹೊರಡಲಿದ್ದು, ಮೇ 6ರಂದು ಬೆಳಗಿನ ಜಾವ 1.35ಕ್ಕೆ ಬೆಂಗಳೂರು ತಲುಪಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭುವನೇಶ್ವರ್- ಬೆಂಗಳೂರು ಮಾರ್ಗ ಮಧ್ಯದಲ್ಲಿ ಬರುವ ಕುರ್ದಾ ರಸ್ತೆ, ಬ್ರಹ್ಮಪುರ್, ಪಾಲ್ಸಾ, ಶ್ರೀಕಾಕುಲಂ, ವಿಜಯನಗರ, ವಿಶಾಖಪಟ್ಟಣ , ರಾಜಮುಂಡ್ರಿ, ವಿಜಯವಾಡ, ಪೆರಂಬೂರು, ಜೊಲಾರ್ ಪೇಟೆ,  ಬಂಗಾರಪೇಟೆ,  ಕೆ. ಆರ್. ಪುರಂ ನಲ್ಲಿ ಈ ರೈಲು ನಿಲುಗಡೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com