ಮುಂದಿನ ಎರಡು-ಮೂರು ದಿನಗಳ ಕಾಲ ಬಿಸಿಗಾಳಿ ಬೀಸುವ ಸಾಧ್ಯತೆಗಳಿದ್ದು, ಆಂಧ್ರ ಪ್ರದೇಶದ ಕೃಷ್ಣ, ಗುಂಟೂರು, ಪ್ರಕಾಶಂ, ನೆಲ್ಲೂರು ಹಾಗೂ ವಿಶಾಖಪಟ್ಟಣಂ ಸೇರಿದಂತೆ ಕರಾವಳಿಯ ಕೆಲ ಭಾಗಗಳಲ್ಲಿ ಮತ್ತು ಕಡಪ, ಕರ್ನೂಲು, ಚಿತ್ತೂರಿನಲ್ಲಿ ಬಿಸಿಗಾಳಿ ಬೀಸುವ ಸೂಚನೆ ಇದೆ. ಶೆಖೆ ಹೆಚ್ಚಾಗುವ ಸಾಧ್ಯತೆ ಇದ್ದು, ಸಾರ್ವಜನಿಕರು ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯ ಅವಧಿಯೊಳಗೆ ಬಿಸಿಲಿಗೆ ಓಡಾಡದಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.