ತುಮಕೂರಿನ ವಿದ್ಯಾ ವಾರಿಧಿ ಅಂತಾರಾಷ್ಟ್ರೀಯ ಶಾಲೆಯ ಯಶಸ್ ಡಿ ಅವರು ರಾಜ್ಯದಲ್ಲಿ ಮಾತ್ರವಲ್ಲ ಚೆನ್ನೈ ಪ್ರದೇಶದಲ್ಲಿ ಕೂಡ ಪ್ರಥಮ ಸ್ಥಾನ ಗಳಿಸಿದ್ದಾರೆ. 5 ಒಟ್ಟಾರೆ ಫಲಿತಾಂಶದ ಪಟ್ಟಿಯಲ್ಲಿ ಯಶಸ್ 32ನೇ ಶ್ರೇಯಾಂಕ ಗಳಿಸಿದ್ದಾರೆ.
ಧಾರವಾಡದ ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್ ನ ಗಿರಿಜಾ ಎಂ. ಹೆಗ್ಡೆ ಅವರು 497 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಎರಡನೇ ಸ್ಥಾನ ಗಳಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ 44ನೇ ಸ್ಥಾನ ಗಳಿಸಿದ್ದಾರೆ.
ಬೆಂಗಳೂರು ಪ್ರೆಸೆಡೆನ್ಸಿ ಶಾಲೆಯ ಐಶ್ವರ್ಯ ಹರಿಹರನ್ ಐಯ್ಯರ್ ಹಾಗೂ ನಾಲದಾಳ ದಿಶಾ ಚೌದರಿ ಅವರು ಕೂಡ 497 ಅಂಕಗಳಿಸಿ ಎರಡನೇ ಸ್ಥಾನಗಳಿಸಿದ್ದು, ರಾಷ್ಟ್ರಮಟ್ಟದಲ್ಲಿ 50 ಹಾಗೂ 51ನೇ ಶ್ರೇಯಾಂಕದಲ್ಲಿದ್ದಾರೆ.
ಸಿಬಿಎಸ್ ಇ ಪರೀಕ್ಷಾ ಮಂಡಳಿಯ 10 ಪ್ರದೇಶಗಳ ಪೈಕಿ ಕರ್ನಾಟಕವನ್ನೊಳಗೊಂಡ ಚೆನ್ನೈ ಪ್ರದೇಶ ಅತ್ಯುತ್ತಮ ಫಲಿತಾಂಶ ದಾಖಲಿಸಿದೆ.
ಕಳೆದ ಫೆಬ್ರವರಿ 15ರಿಂದ ಏಪ್ರಿಲ್ 14ರವರೆಗೆ ನಡೆದಿದ್ದ ಸಿಬಿಎಸ್ ಇ ಶಾಲೆಗಳ 10ನೇ ತರಗತಿಯ ಪರೀಕ್ಷೆಗೆ ಒಟ್ಟು 17.61 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ಇದರಲ್ಲಿ 16.04 ಲಕ್ಷ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಫಲಿತಾಂಶದಲ್ಲಿ ಶೇ.4.40ರಷ್ಟು ಹೆಚ್ಚಳ ಕಂಡುಬಂದಿದೆ. ಕಳೆದ ವರ್ಷ ಶೇ.86.70ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರು.
ತಿರುವನಂತಪುರ ಶೇ. 99.85ರಷ್ಟು ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಗಳಿಸಿದೆ. ಕ್ರಮವಾಗಿ ಚೆನ್ನೈ (ಶೇ.99), ಅಜ್ಮೀರ್ (ಶೇ.95.89), ಪಂಚಕುಲ (ಶೇ.93.72), ಪ್ರಯಾಗ್ ರಾಜ್ (ಶೇ.92.55) ಭುವನೇಶ್ವರ (ಶೇ.92.32), ಪಾಟನಾ (91.86) ಡೆಹ್ರಾಡೂನ್ (ಶೇ.89.04), ದೆಹಲಿ (ಶೇ.80.97), ಗುವಾಹತಿ (ಶೇ.74.49) ರಾಜ್ಯಗಳು ಅತಿ ಹೆಚ್ಚು ಫಲಿತಾಂಶ ಗಳಿಸಿದ ಮೊದಲ ಹತ್ತು ರಾಜ್ಯಗಳಾಗಿವೆ. ದೇಶಾದ್ಯಂತ 4974 ಶಾಲೆಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.