ಗುಜರಾತ್ ನ ಮಹಿಸಗರ್ ನಲ್ಲಿದ್ದ ರೈತ ಪರ್ವತ್ ಗಾಲಾ ಬರಿಯಾ ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಹಾವು ಕಚ್ಚಿದೆ. ಇದರಿಂದ ಆಕ್ರೋಶಗೊಂಡ ರೈತ ಹಾವಿನ ಮೇಲೆ ಸೇಡು ತೀರಿಸಿಕೊಳ್ಳಲು ಅದನ್ನು ತಾನೂ ಕಚ್ಚಿದ್ದಾನೆ. ಹತ್ತಿರದಲ್ಲೇ ಇದ್ದ ಸಂಬಂಧಿಕರು ಈ ಘಟನೆಯನ್ನು ನೋಡಿ ಹಾವನ್ನು ಅಲ್ಲೇ ದಹನ ಮಾಡಿದ್ದಾರೆ. ಹಾವು ಕಚ್ಚಿದ ವ್ಯಕ್ತಿಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆತ ಬದುಕಿ ಉಳಿಯಲಿಲ್ಲ.