ಮಾಯಾವತಿ ಅವರ ಹೇಳಿಕೆ ರಾಜಕೀಯ ಭಾಷಣವನ್ನು ಅಧಃಪತನಕ್ಕಿಳಿಸಿದೆ ಎಂದು ಅರುಣ್ ಜೇಟ್ಲಿ ಹೇಳಿದ್ದು, ಸಹೋದರಿ ಮಾಯಾವತಿ- ಅವರು ಪ್ರಧಾನಿಯಾಗುವುದಕ್ಕೆ ಬಯಸುತ್ತಿದ್ದಾರೆ. ಅವರ ಆಡಳಿತ, ನೀತಿ, ರಾಜಕೀಯ ಮಾತುಗಾರಿಕೆ ಎಲ್ಲವೂ ಸಾರ್ವಕಾಲಿಕ ಅಧಃಪತನಕ್ಕಿಳಿದಿದೆ. ಮಾಯಾವತಿ ಇಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಡೆಸಿದ ವೈಯಕ್ತಿಕ ಟೀಕೆ ಅವರು ಸಾರ್ವಜನಿಕ ಜೀವನದಲ್ಲಿರುವುದಕ್ಕೇ ನಾಲಾಯಕ್ ಎಂಬುದನ್ನು ಬಹಿರಂಗಪಡಿಸಿದೆ ಎಂದು ಜೇಟ್ಲಿ ಟ್ವೀಟ್ ಮಾಡಿದ್ದಾರೆ.