ಮೇ 12ರಂದು ನಡೆದಿದ್ದ ಆರನೇ ಹಂತದ ಮತದಾನದ ವೇಳೆ ಹರ್ಯಾಣದ ಝಜ್ಜರ್ ನಲ್ಲಿ ಮತದಾನವಾಗಿತ್ತು. ಈ ವೇಳೆ ಬಿಜೆಪಿ ಕಾರ್ಯಕರ್ತನಾಗಿದ್ದ ಧರ್ಮೇಂದ್ರ ತನ್ನ ಕುಟುಂಬಸ್ಥರಿಗೆ ಬಿಜೆಪಿ ಮತ ಹಾಕುವಂತೆ ಸೂಚಿಸಿದ್ದ, ಆದರೆ ಆತನ ಸಹೋದರ ಇದಕ್ಕೆ ಒಪ್ಪಲಿಲ್ಲ. ಈ ವೇಳೆ ಇಬ್ಬರ ನಡುವೆ ಮಾತನಿ ಚಕಮಕಿ ಏರ್ಪಟ್ಟಿತ್ತು, ಮತದಾನದ ಬಳಿಕ ಮತ್ತೆ ಇದೇ ವಿಚಾರವಾಗಿ ಸಹೋದರರ ನಡುವೆ ಮತ್ತೆ ಮಾತಿನ ಚಕಮಕಿ ಏರ್ಪಟ್ಟಿತ್ತು, ಈ ವೇಳೆ ಸಹೋದರ ರಾಜ ತಾನು ಕಾಂಗ್ರೆಸ್ ಗೆ ಮತ ಹಾಕಿರುವ ಕುರಿತು ಹೇಳಿಕೊಂಡಿದ್ದಾನೆ. ಇದರಿಂದ ಕ್ರೋಧಗೊಂಡ ಧರ್ಮೇಂದ್ರ ನಾಡ ಪಿಸ್ತೂಲ್ ತಂದು ಆತನ ಮೇಲೆ ಗುಂಡು ಹಾರಿಸಿದ್ದಾನೆ. ಈ ವೇಲೆ ಜಗಳ ತಡೆಯಲು ಬಂದ ತಾಯಿ ಫೂಲ್ಮತಿಯವರಿಗೂ ಗಾಯಗಳಾಗಿವೆ.