ಬಿಜೆಪಿಯಂತೆ ಕಾಂಗ್ರೆಸ್ ಟೊಳ್ಳು-ಸುಳ್ಳು ಭರವಸೆಗಳನ್ನು ನೀಡುವುದಿಲ್ಲ: ರಾಬರ್ಟ್ ವಾದ್ರಾ

ಉದ್ಯಮಿ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಪ್ರಿಯಾಂಕಾ ಸಕ್ರಿಯ ರಾಜಕೀಯಕ್ಕೆ ಇಳಿದ ಬೆನ್ನಲ್ಲೇ ಅವರ ಪತಿ ರಾಬರ್ಟ್​ ವಾದ್ರಾ ಕೂಡ ಕೆಲವು ರಾಜಕೀಯ ....
ರಾಬರ್ಟ್ ವಾದ್ರಾ
ರಾಬರ್ಟ್ ವಾದ್ರಾ
ನವದೆಹಲಿ: ಉದ್ಯಮಿ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ  ಪ್ರಿಯಾಂಕಾ ಸಕ್ರಿಯ ರಾಜಕೀಯಕ್ಕೆ ಇಳಿದ ಬೆನ್ನಲ್ಲೇ ಅವರ ಪತಿ ರಾಬರ್ಟ್​ ವಾದ್ರಾ ಕೂಡ ಕೆಲವು ರಾಜಕೀಯ ವಿಚಾರಗಳನ್ನು ಮಾತನಾಡಲು ಅರಂಭಿಸಿದ್ದಾರೆ 
ಫೇಸ್​ಬುಕ್​ನಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಪೋಸ್ಟ್ ಹಾಕಿರುವ ರಾಬರ್ಟ್ ವಾದ್ರಾ, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಜನರಿಗೆ ಟೊಳ್ಳು ಹಾಗೂ ಸುಳ್ಳು ಭರವಸೆಗಳನ್ನು ನೀಡುತ್ತಿದೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್​ಬಿಜೆಪಿಯಂತೆ ಮಾಡುವುದಿಲ್ಲ. ಜನರಿಗೆ ಕೊಟ್ಟ ಭರವಸೆಯನ್ನು ಈಡೇರಿಸುತ್ತದೆ. ಜನರಿಗೆ ಏನು ಬೇಕೋ ಅದನ್ನು ನಮ್ಮ ಪಕ್ಷ ನೀಡುತ್ತದೆ ಎಂದು ಬರೆದಿದ್ದಾರೆ. ಅಲ್ಲದೆ ಎರಡು ಫೋಟೋಗಳನ್ನೂ ಅವರು ಫೇಸ್​ಬುಕ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಒಂದ ಫೋಟೋದಲ್ಲಿ ಅವರು ಜನರನ್ನು ಮತದಾನ ಮಾಡಲು ಒತ್ತಾಯಿಸುತ್ತಿದ್ದಾರೆ. ಇನ್ನೊಂದು ಫೋಟೋದಲ್ಲಿ ರಾಬರ್ಟ್​ ವಾದ್ರಾ ಬಡವರಿಗೆ ಆಹಾರ ನೀಡುತ್ತಿರುವುದನ್ನು ನೋಡಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com