ಗಾಂಧಿಯನ್ನು ಕೊಂದ ಗೋಡ್ಸೆ ದೇಶಭಕ್ತ ಎಂದು ಬಿಜೆಪಿ ಅಭ್ಯರ್ಥಿ ಪ್ರಗ್ಯಾಸಿಂಗ್ ಠಾಕೂರ್ ವಿರುದ್ಧ ಬಿಜೆಪಿ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ದೂರಿರಿರುವ ಅಜಂ ಖಾನ್, ಈಗ ಜನ ನಿರ್ಧರಿಸಬೇಕಿದೆ, ನಮ್ಮ ದೇಶ ಗಾಂಧಿ ಜೊತೆ ಅಥವಾ ಗೂಡ್ಸೆ ಜೊತೆ ಗುರುತಿಸಿಕೊಳ್ಳಬೇಕೆ ಎಂಬುದನ್ನು ನಿರ್ಧರಿಸಲಿ, ಮಾನವೀಯತೆ ಅಥವಾ ಖಾಕಿ ಚಡ್ಡಿಯೇ ಎಂಬುದನ್ನು ಜನರೇ ತೀರ್ಮಾನಿಸಬೇಕು ಎಂದು ಹೇಳಿದ್ದಾರೆ.