ಆರ್ ಎಸ್ ಎಸ್ ಗುರುತು ಖಾಕಿ ಚಡ್ಡಿ ಹಾಗೆಯೇ ನಾಥೂರಾಮ್ ಗೋಡ್ಸೆ: ಅಜಂ ಖಾನ್

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗುರುತು ಖಾಕಿ ಚಡ್ಡಿಯ ರೀತಿಯೇ ನಾಥೂರಾಮ್ ಗೂಡ್ಸೆ ಎಂದು ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ...
ಅಜಂ ಖಾನ್
ಅಜಂ ಖಾನ್
ರಾಂಪುರ್: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗುರುತು ಖಾಕಿ ಚಡ್ಡಿಯ ರೀತಿಯೇ ನಾಥೂರಾಮ್ ಗೂಡ್ಸೆ ಎಂದು ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಆರೋಪಿಸಿದ್ದಾರೆ.
ಗಾಂಧಿಯನ್ನು ಕೊಂದ ಗೋಡ್ಸೆ ದೇಶಭಕ್ತ ಎಂದು ಬಿಜೆಪಿ ಅಭ್ಯರ್ಥಿ ಪ್ರಗ್ಯಾಸಿಂಗ್ ಠಾಕೂರ್ ವಿರುದ್ಧ ಬಿಜೆಪಿ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ದೂರಿರಿರುವ ಅಜಂ ಖಾನ್, ಈಗ ಜನ ನಿರ್ಧರಿಸಬೇಕಿದೆ, ನಮ್ಮ ದೇಶ ಗಾಂಧಿ ಜೊತೆ ಅಥವಾ ಗೂಡ್ಸೆ ಜೊತೆ ಗುರುತಿಸಿಕೊಳ್ಳಬೇಕೆ ಎಂಬುದನ್ನು ನಿರ್ಧರಿಸಲಿ, ಮಾನವೀಯತೆ ಅಥವಾ ಖಾಕಿ ಚಡ್ಡಿಯೇ ಎಂಬುದನ್ನು ಜನರೇ ತೀರ್ಮಾನಿಸಬೇಕು ಎಂದು ಹೇಳಿದ್ದಾರೆ.
ನಾಥೂರಾಮ್ ಗೋಡ್ಸೆ ಒಬ್ಬ ದೇಶಭಕ್ತ ಆಗಿದ್ದ. ಆಗಲೂ ಆತ ದೇಶಭಕ್ತ ಮುಂದೆಯೂ ಕೂಡ ಆತ ದೇಶಭಕ್ತನಾಗಿಯೇ ಉಳಿಯುತ್ತಾನೆ ಎಂದು ಸಾದ್ವಿ ಪ್ರಗ್ಯಾ ಸಿಂಗ್ ಹೇಳಿದ್ದರು. 
ಗಾಂಧಿ ಕೊಂದ ಗೂಡ್ಸೆ ಬೆಂಬಲಿಗರಿಗೆ ಬಿಜೆಪಿ ಟಿಕೆಟ್ ನೀಡಿದೆ, ಹೀಗಾಗಿ ಅವರನ್ನು ದೇಶದಿಂದ ಹೊರ ಎಸೆಯಬೇಕು ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com