ತೆಲಂಗಾಣ: ದ್ವಿಚಕ್ರ ವಾಹನಕ್ಕೆ ಶಾಸಕಿಯ ಬೆಂಗಾವಲು ವಾಹನ ಡಿಕ್ಕಿ, 3 ವರ್ಷದ ಹೆಣ್ಣುಮಗು ಸಾವು

ಮುಲುಗು ಶಾಸಕಿ ಧನಸರೈ ಅನಸೂಯ ಅವರ ಬೆಂಗಾವಲು ವಾಹನದಡಿ ಸಿಕ್ಕಿ ಮೂರು ವರ್ಷದ ಮಗುವೊಂದು ಸಾವನ್ನಪಿರುವ ಘಟನೆ ತೆಲಂಗಾಣದ ಏತುರುನಗರಂ ಮಂಡಲ್ ಪ್ರದೇಶದ ಜೇಡಿವಗಿ ಕೋಯಾದಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಲುಗು: ಮುಲುಗು ಶಾಸಕಿ ಧನಸರೈ ಅನಸೂಯ ಅವರ ಬೆಂಗಾವಲು ವಾಹನದಡಿ ಸಿಕ್ಕಿ ಮೂರು ವರ್ಷದ ಮಗುವೊಂದು ಸಾವನ್ನಪಿರುವ ಘಟನೆ ತೆಲಂಗಾಣದ ಏತುರುನಗರಂ ಮಂಡಲ್ ಪ್ರದೇಶದ ಜೇಡಿವಗಿ ಕೋಯಾದಲ್ಲಿ ನಡೆದಿದೆ.
ಶನಿವಾರ ಬೆಳಿಗ್ಗೆ ಸಂಭವಿಸಿದ ಈ ಅಪಘಾತದಲ್ಲಿ ಪಾಕವಪುರ್ ಸಮೀಪದ ಗೋತಿ ಕೋಯಾ ಗಾರ್ಡನ್ ನಿವಾಸಿ ಸರಸ್ವತಿ(3) ಮೃತಪಟ್ಟಿದ್ದಾಳೆ.
ಅಪಘಾತದ ವೇಳೆ ಸರಸ್ವತಿ ತನ್ನ ತಾಯಿ ವಿಜಯಾ ಹಾಗು ಅಂಕಲ್ ಕೆ. ಅರುಣ್ ಜತೆಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಳೆಂದು ಪೋಲೀಸರು ಹೇಳಿದ್ದಾರೆ.
ಸರಸ್ವತಿಯನ್ನು ಸಮಿಪದ ಅಂಗನವಾಡಿಗೆ ಬಿಡುವುದಕ್ಕಾಗಿ ವಿಜಯಾ ಹಾಗೂ ಅವರ ಸಬಂಧಿ ದ್ವಿಚಕ್ರ ವಾಹನದಲ್ಲಿ ತೆರಳುವಾಗ ಶಾಸಕಿಯ ಬೆಂಗಾವಲು ವಾಹನ ಡಿಕ್ಕಿಯಾಗಿದೆ. ಅಪಘಾತದಲ್ಲಿ ಸರಸ್ವತಿಯ ತಕೆಗೆ ತೀವ್ರ ಪೆಟ್ಟಾಗಿ ಆಕೆ ಸ್ಥಳದಲ್ಲೇ ಸಾವನ್ನ[ಪ್ಪಿದ್ದಾಳೆ.
ಅಪಘಾತದ ವೇಳೆ ಶಾಸಕಿ ಮಲ್ಲೂರಿಗೆ ತೆರ:ಳಿದ್ದರು. ಸ್ಥಳೀಯ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com