ಮುಂಬೈನ ಅಗ್ರಿಪದದಲ್ಲಿ ಶುಕ್ರವಾರ ರಾತ್ರಿ 7 ಗಂಟೆ ಸುಮಾರಿನಲ್ಲಿ 28 ವರ್ಷದ ಬೈಕ್ ಸವಾರ ಕೃಷ್ಣ ಮೇಸ್ಕರ್ ನೋ ಪಾರ್ಕಿಂಗ್ ನಲ್ಲಿ ಬೈಕ್ ನಿಲ್ಲಿಸಿದ್ದ. ಅದನ್ನು ಕಂಡ ಕಾನ್ಸ್ಟೇಬಲ್ ಅನ್ನು ತೆಗೆಯುವಂತೆ ಸೂಚಿಸಿದ್ದಾರೆ. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಈ ವೇಳೆ ಗರಂ ಆದ ಬೈಕ್ ಸವಾರ ಕಾನ್ಸ್ಟೇಬಲ್ ಜತೆ ಅಸಭ್ಯವಾಗಿ ವರ್ತಿಸಿದ್ದಾನೆ. ನಂತರ ಬೈಕ್ ಅನ್ನು ವೇಗವಾಗಿ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ.