ನವದೆಹಲಿ: ಉಗ್ರರ ತಂಡವೊಂದು ದಕ್ಷಿಣ ಭಾರತವನ್ನು ಟಾರ್ಗೆಟ್ ಮಾಡಿ ಕಾರ್ಯಾಚರಣೆಗೆ ಇಳಿದಿದೆ ಎಂಬ ಸಂಗತಿ ಹೊರಬಿದ್ದಿರುವುದು ಆತಂಕ ಮೂಡಿಸಿದೆ.
ಕೆಲ ಯುವಕರು ತಂಡವೊಂದನ್ನು ರಚಿಸಿಕೊಂಡು ದಾಳಿ ನಡೆಸುವ ಬಗ್ಗೆ ಸಂಚು ರೂಪಿಸಿರುವ ಬಗ್ಗೆ ಮಾಹಿತಿ ತಿಳಿದುಬಂದಿದ್ದು, ತಮಿಳುನಾಡಿನ 10 ಕಡೆಗಳಲ್ಲಿ ರಾಷ್ಟ್ರೀಯ ವಿಚಾರಣಾ ದಳದ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.