ನಾಳೆ ಕರ್ನಾಟಕ, ತಮಿಳು ನಾಡಿನಲ್ಲಿ ಭಾರೀ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ಕರ್ನಾಟಕದ ದಕ್ಷಿಣ ಒಳನಾಡು ಮತ್ತು ತಮಿಳು ನಾಡಿನ ಹಲವೆಡೆಗಳಲ್ಲಿ ನಾಳೆ ಗುಡುಗು-ಮಿಂಚಿನಿಂದ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಕರ್ನಾಟಕದ ದಕ್ಷಿಣ ಒಳನಾಡು ಮತ್ತು ತಮಿಳು ನಾಡಿನ ಹಲವೆಡೆಗಳಲ್ಲಿ ನಾಳೆ ಗುಡುಗು-ಮಿಂಚಿನಿಂದ ಕೂಡಿದ ಗಂಟೆಗೆ 40ರಿಂದ 50 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವಿಕೆಯೊಂದಿಗೆ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾಗಳಲ್ಲಿ ಕೂಡ ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ಸಿಕ್ಕಿದೆ.
ವಿದರ್ಭ ಮತ್ತು ಈಶಾನ್ಯ ಮಧ್ಯ ಪ್ರದೇಶ, ತೆಲಂಗಾಣದ ಕೆಲವು ಭಾಗಗಳು, ಮಧ್ಯ ಮಹಾರಾಷ್ಟ್ರ, ಮರಾಠಾವಾಡ, ಛತ್ತೀಸ್ ಗಢ, ಒಡಿಶಾ, ಜಾರ್ಖಂಡ್ ಮತ್ತು ಪೂರ್ವ ಉತ್ತರ ಪ್ರದೇಶ ರಾಜ್ಯಗಳಲ್ಲಿ ಉಷ್ಣ ಗಾಳಿ ಬೀಸುತ್ತಿದೆ. ಇನ್ನು ಗಂಟೆಗೆ 35ರಿಂದ 45 ಕಿಲೋ ಮೀಟರ್ ವೇಗದಲ್ಲಿ ಭಾರೀ ಗಾಳಿ ಈಶಾನ್ಯ ಅರೇಬಿಯನ್ ಸಮುದ್ರ ತೀರ ಹಾಗೂ ಗುಜರಾತ್ ತೀರ ಭಾಗಗಳಲ್ಲಿ ಬೀಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com