ಇದೇ ವೇಳೆ ಬಿಜೆಪಿ ಚುನಾವಣೆ ಎದುರಿಸಿರುವ ಬಗ್ಗೆಯೂ ಮೋದಿ ಮಾತನಾಡಿದ್ದು, ಕೇರಳದಿಂದ, ಕಾಶ್ಮೀರ, ಬಂಗಾಳದಿಂದ ತ್ರಿಪುರದ ವರೆಗೆ ಬಿಜೆಪಿ ದ್ವೇಷಕ್ಕೆ ಗುರಿಯಾಗಿದೆ. ಬಿಜೆಪಿ ರಾಜಕೀಯ ದೌರ್ಜನ್ಯ, ರಾಜಕೀಯ ಅಸ್ಪೃಷ್ಯತೆಯನ್ನು ಎದುರಿಸುತ್ತಿದೆ. ದ್ವೇಷ ರಾಜಕಾರಣದ ನಡುವೆಯೂ ಎಲ್ಲರ ಜೊತೆ, ಎಲ್ಲರ ವಿಕಾಸ ಬಿಜೆಪಿಯ ಮಂತ್ರವಾಗಿ ಮುಂದುವರೆಯಲಿದೆ, ದೂರದೃಷ್ಟಿ ಹಾಗೂ ಕಠಿಣ ಶ್ರಮಕ್ಕೆ ಗ್ರಹಿಕೆಗಳನ್ನು ಬದಲಾವಣೆ ಮಾಡುವ ಸಾಮರ್ಥ್ಯವಿದೆ ಎಂದು ಮೋದಿ ಹೇಳಿದ್ದಾರೆ.