ಮುಂದಿನ 5 ವರ್ಷಗಳು ನಮಗೆ ಅತ್ಯಂತ ಮಹತ್ವ: ನಿಯೋಜಿತ ಪ್ರಧಾನಿ ಮೋದಿ

ವಿಶ್ವದ ವ್ಯವಸ್ಥೆಯಲ್ಲಿ ಭಾರತ ಕಳೆದುಕೊಂಡ ಸ್ಥಾನವನ್ನು ಮತ್ತೆ ಪಡೆಯಲು ಲೋಕಸಭೆ ...
ಅಹಮದಾಬಾದ್ ನಲ್ಲಿ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ
ಅಹಮದಾಬಾದ್ ನಲ್ಲಿ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ
ಅಹಮದಾಬಾದ್: ವಿಶ್ವದ ವ್ಯವಸ್ಥೆಯಲ್ಲಿ ಭಾರತ ಕಳೆದುಕೊಂಡ ಸ್ಥಾನವನ್ನು ಮತ್ತೆ ಪಡೆಯಲು ಲೋಕಸಭೆ ಚುನಾವಣೆಯಲ್ಲಿ ದೇಶದ ಜನರು ಸ್ಪಷ್ಟ ತೀರ್ಪು ನೀಡಿ ನಮಗೆ ಮತ್ತೊಮ್ಮೆ ಅವಕಾಶ ನೀಡಿದ್ದಾರೆ ಎಂದು ನಿಯೋಜಿತ ಪ್ರಧಾನ ಮಂತ್ರಿ ನರೇಂದ್ರ  ಮೋದಿ ಹೇಳಿದ್ದಾರೆ.
ಗುಜರಾತ್ ನ ಬಿಜೆಪಿ ಘಟಕ ನಿನ್ನೆ ಅಹಮದಾಬಾದ್ ನಲ್ಲಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಕಂಡರು ಸಹ ಅಹಂಕಾರದಿಂದ ಮೆರೆಯದೆ ವಿನಮ್ರತೆಯಿಂದ ನಡೆದುಕೊಳ್ಳುವಂತೆ ನೂತನ ಸಂಸದರಿಗೆ ಕಿವಿಮಾತು ಹೇಳಿದರು.
ಭಾರತ ಮತ್ತು ವಿಶ್ವದಲ್ಲಿ ತೆಗೆದುಕೊಂಡರೆ ಮುಂದಿನ 5 ವರ್ಷಗಳ ಸಮಯ ಅತ್ಯಂತ ಮಹತ್ವದ್ದಾಗಿರುತ್ತದೆ. ಅದೃಷ್ಟವಶಾತ್, ನಮಗೆ ಈ ಬಾರಿ ಸ್ಪಷ್ಟ ಸಂಪೂರ್ಣ ಬಹುಮತ ಸಿಕ್ಕಿದೆ, ಅದರ ಜೊತೆಗೆ ಎನ್ ಡಿಎ ಮೈತ್ರಿಕೂಟಗಳ ಬೆಂಬಲ ಕೂಡ ಇದೆ. 1942ರಿಂದ 1947ರವರೆಗೆ ಭಾರತದ ಇತಿಹಾಸದಲ್ಲಿ ಮಹತ್ವದ್ದಾಗಿದ್ದಂತೆ ಮುಂದಿನ 5 ವರ್ಷಗಳ ಸಮಯ ಅತ್ಯಂತ ಪ್ರಮುಖವಾಗಿರುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com