ಜಾರ್ಖಂಡ್ ನಲ್ಲಿ ನಕ್ಸಲೀಯರಿಂದ ಐಇಡಿ ಸ್ಫೋಟ: 11 ಸಿಆರ್ ಪಿಎಫ್, ರಾಜ್ಯ ಪೊಲೀಸ್ ಸಿಬ್ಬಂದಿಗೆ ಗಾಯ

ಜಾರ್ಖಂಡ್ ನ ಸೆರೈಕೆಲಾ ಖರ್ಸವನ್ ಜಿಲ್ಲೆಯಲ್ಲಿ ಮಂಗಳವಾರ ನಸುಕಿನ ಜಾವ ನಕ್ಸಲೀಯರ ಐಇಡಿ ಸ್ಫೋಟಕ್ಕೆ 11 ಮಂದಿ ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ ಪಿಎಫ್)ಮತ್ತು ರಾಜ್ಯ ಪೊಲೀಸ್ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ರಾಂಚಿ: ಜಾರ್ಖಂಡ್ ನ ಸೆರೈಕೆಲಾ ಖರ್ಸವನ್ ಜಿಲ್ಲೆಯಲ್ಲಿ ಮಂಗಳವಾರ ನಸುಕಿನ ಜಾವ ನಕ್ಸಲೀಯರ ಐಇಡಿ ಸ್ಫೋಟಕ್ಕೆ 11 ಮಂದಿ ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ ಪಿಎಫ್)ಮತ್ತು ರಾಜ್ಯ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಸಿಆರ್ ಪಿಎಫ್ ನ ವಿಶೇಷ ಅರಣ್ಯ ಯುದ್ಧ ಘಟಕ, ಕೋಬ್ರಾ ಮತ್ತು ರಾಜ್ಯ ಪೊಲೀಸರು ಜಂಟಿ ತಂಡ ಇಂದು ನಸುಕಿನ ಜಾವ 5 ಗಂಟೆ ಸುಮಾರಿಗೆ  ಕುಚೈ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಈ ಸ್ಫೋಟ ಸಂಭವಿಸಿದೆ.
ಸುಧಾರಿತ ಸ್ಫೋಟಕ ಸಾಮಗ್ರಿಯಾದ ಐಇಡಿಯನ್ನು ಧೂಳು ತುಂಬಿದ ಹಾದಿಯಡಿ ಇಟ್ಟಿದ್ದರು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com