ಎನ್ಐಎ ತಂಡವುಶ್ರೀಲಂಕಾದ ಆತ್ಮಹತ್ಯೆ ಬಾಂಬರುಗಳಾದ ಇಬ್ಬರು ಸಹೋದರರ ಪ್ರಯಾಣದ ವಿವರಗಳನ್ನು ಕಲೆಹಾಕಲಿದೆ.ಈಸ್ಟರ್ ಬೆಳಿಗ್ಗೆ ಶಾಂಂಗ್ರಿ-ಲಾ ಮತ್ತು ಸಿನ್ನಮೋನ್ ಗ್ರ್ಯಾಂಡ್ ಹೋಟೆಲ್ ನಲ್ಲಿ ನಡೆಸಿದ್ದ ದಾಳಿ ಕುರಿತು ಮಾಹಿತಿ ಪಡೆಯಲಾಗುವುದು ಎಂದು ವರದಿಯಾಗಿದೆ. ಈ ಹಿಂದೆ 2012 ರ ವ್ಯವಹಾರ ವೀಸಾದಲ್ಲಿ ಅವರು ಭಾರತಕ್ಕೆ ಭೇಟಿ ಕೊಟ್ಟಿದ್ದರು. ಬೆಂಗಳೂರು, ಕೊಚ್ಚಿ, ಚೆನ್ನೈ, ಮುಂಬೈ ಮತ್ತು ದೆಹಲಿಗಳಿಗೆ ವ್ಯಾಪಾರ ಸಂಬಂಧಿ ಕೆಲಸಕ್ಕಾಗಿ ಅವರು ಆಗಮಿಸಿದ್ದರು.