ಮಗುವನ್ನು ಜೀವಂತವಾಗಿ ಹೂಳಲು ಯತ್ನ: ಪೊಲೀಸರಿಂದ ಇಬ್ಬರ ಬಂಧನ

ಮಗುವನ್ನು ಜೀವಂತವಾಗಿ ಹೂಳಲು ಯತ್ನಿಸಿದ್ದ ಇಬ್ಬರನ್ನು ಬಂಧಿಸಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.  
ಜೀವಂತ ಮಗು ಊಳಲು ಯತ್ನಿಸಿದವರ ಬಂಧನ
ಜೀವಂತ ಮಗು ಊಳಲು ಯತ್ನಿಸಿದವರ ಬಂಧನ

ಹೈದರಾಬಾದ್: ಮಗುವನ್ನು ಜೀವಂತವಾಗಿ ಹೂಳಲು ಯತ್ನಿಸಿದ್ದ ಇಬ್ಬರನ್ನು ಬಂಧಿಸಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.  

ಗುರುವಾರ ಬೆಳಗ್ಗೆ ಜ್ಯುಬಿಲಿ ಬಸ್ ನಿಲ್ದಾಣದ ಮೈದಾನದಲ್ಲಿ ಇಬ್ಬರು ವ್ಯಕ್ತಿಗಳು ಬ್ಯಾಗ್ ವೊಂದನ್ನು ಹಿಡಿದು ನಿಂತಿರುವುದನ್ನು ರಿಕ್ಷಾ ಚಾಲಕರೊಬ್ಬರು ಗಮನಿಸಿದ್ದರು. ಅಲ್ಲದೇ ಅವರು ಮೈದಾನದಲ್ಲಿ ಗುಂಡಿ ತೋಡುತ್ತಿರುವುದನ್ನು ಗಮನಿಸಿದ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ

ಕೂಡಲೇ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದಾಗ ಬ್ಯಾಗ್ ನಲ್ಲಿ ಮಗು ಇರುವುದು ಪತ್ತೆಯಾಗಿತ್ತು. ಬಳಿಕ ಕರೀಂನಗರ್ ಜಿಲ್ಲೆಯ ನಿವಾಸಿಗಳಾದ ಇಬ್ಬರನ್ನು ವಿಚಾರಣೆಗೊಳಪಡಿಸಿದಾಗ, ಇದು ತನ್ನ ಮೊಮ್ಮಗಳು, ಇತ್ತೀಚೆಗಷ್ಟೇ ಆಪರೇಶನ್ ಮಾಡಿದ್ದರೂಅದು ಫಲಕಾರಿಯಾಗದೆ ಸಾವನ್ನಪ್ಪಿದೆ.

ಅಲ್ಲದೇ ಮೃತದೇಹವನ್ನು ಸಾರ್ವಜನಿಕ ಸಾರಿಗೆಯಲ್ಲಿ ತರಲು ಅನುಮತಿ ನೀಡುವುದಿಲ್ಲ. ಹೀಗಾಗಿ ಮೈದಾನದಲ್ಲಿ ಶವ ಹೂಳಲು ಬಂದಿರುವುದಾಗಿ ತಿಳಿಸಿದ್ದರು.

ಆದರೆ ಚೀಲದಿಂದ ಮಗುವನ್ನು ಹೊರತೆಗೆದು ಪೊಲೀಸರು ಪರಿಶೀಲಿಸಿದಾಗ ಮಗು ಜೀವಂತಾಗಿತ್ತು! ಬಳಿಕ ಮಗುವನ್ನು ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದು, ಇಬ್ಬರನ್ನೂ ಪೊಲೀಸರು ಬಂಧಿಸಿ ಮುಂದಿನ ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com