ಮುಂಬೈ: ಮಹಾರಾಷ್ಟ್ರದ ಹಾಲಿ ವಿಧಾನಸಭೆ ಅವಧಿ ಮುಕ್ತಾಯಗೊಳ್ಳುತ್ತಿದ್ದರೂ ಹೊಸ ಸರ್ಕಾರ ರಚನೆ ಕಗ್ಗಂಟಾಗಿಯೇ ಉಳಿದಿದೆ.
ಯಥಾಪ್ರಕಾರ ಶಿವಸೇನೆ ಅಧಿಕಾರ ಹಂಚಿಕೆ ಪಟ್ಟನ್ನು ಕಿಂಚಿತ್ತೂ ಸಡಿಲಗೊಳಿಸದೇ ತನ್ನ ಬೇಡಿಕೆಗೆ ಒಪ್ಪಿಗೆ ಸಿಗುವವರೆಗೂ ಬಿಜೆಪಿ ಜೊತೆ ಸರ್ಕಾರ ರಚನೆಯ ಮಾತೇ ಇಲ್ಲ ಎನ್ನುತ್ತಿದೆ. ಈ ನಡುವೆ ಶಿವಸೇನೆ ನಾಯಕ ಸಂಜಯ್ ರಾವುತ್ ಶಿವಸೇನೆಗೆ 175 ಶಾಸಕರ ಬೆಂಬಲ ಇದೆ ಎಂದು ಹೇಳಿದ್ದಾರೆ.
ಶಿವಸೇನೆಗೆ ಬೆಂಬಲ ನೀಡುವ ಶಾಸಕರ ಸಂಖ್ಯೆ 175 ನ್ನೂ ದಾಟಬಹುದು ಎಂದು ಶಿವಸೇನೆ ಹೇಳಿದೆ. ಸರ್ಕಾರ ರಚನೆ ಸಂಬಂಧ ಮುಖವಾಣಿ ಸಾಮ್ನಾದಲ್ಲಿ ಲೇಖನ ಪ್ರಕಟಿಸಿರುವ ಶಿವಸೇನೆ, ಬಿಜೆಪಿ ಶಿವಸೇನೆ ಬೆಂಬಲ ಇಲ್ಲದೇ ಸರ್ಕಾರ ರಚನೆಗೆ ಮುಂದಾದರೆ ಬಹುಮತ ಸಾಬೀತುಪಡಿಸುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದೆ.
Advertisement