ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ನವೆಂಬರ್ 30ರಂದು ನಡೆಸಲು ಉದ್ದೇಶಿಸಿದ್ದ 'ಭಾರತ್ ಬಚಾವೊ’ ಪ್ರತಿಭಟನಾ ರ್ಯಾಲಿಯನ್ನು ಕಾಂಗ್ರೆಸ್, ಡಿಸೆಂಬರ್ 14ಕ್ಕೆ ಮುಂದೂಡಿದೆ.
‘ನವೆಂಬರ್ 30ರಂದು ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ನಿಗದಿಯಾಗಿದ್ದ ಭಾರತ್ ಬಚಾವೊ ಪ್ರತಿಭಟನಾ ರ್ಯಾಲಿಯ ದಿನಾಂಕವನ್ನು ಡಿ. 14ಕ್ಕೆ ಮುಂದೂಡಲಾಗಿದೆ.’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಕಾಂಗ್ರೆಸ್ ದೇಶವ್ಯಾಪಿ ಪ್ರತಿಭಟನೆ ನಡೆಸಲು ಸಜ್ಜಾಗಿದ್ದು, ನ.30 ರಂದು ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಭಾರತ್ ಬಚಾವೋ ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿತ್ತು. ಆದರೆ ಈಗ ದಿಢೀರ್ ರ್ಯಾಲಿಯನ್ನು ಮುಂದೂಡಿದೆ.
Advertisement