ಸತಾರಾ: ಬಿಜೆಪಿ ಪಕ್ಷಕ್ಕೆ ಬಹುಮತವಿಲ್ಲ ಹೀಗಾಗಿಯೇ ಅವರು ಸರ್ಕಾರ ರಚಿಸಿರಲಿಲ್ಲ ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರು ಸೋಮವಾರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಬಿಜೆಪಿಗೆ ಬಹುಮತವಿಲ್ಲ. ಹೀಗಾಗಿಯೇ ಅವರು ಸರ್ಕಾರ ರಚಿಸಿರಲಿಲ್ಲ. ತಮಗೆ ಬಹುಮತವಿಲ್ಲ ಎಂದು ಈ ಹಿಂದೆಯೇ ರಾಜ್ಯಪಾಲರಿಗೂ ಬಿಜೆಪಿ ಪತ್ರ ಬರೆದಿತ್ತು ಎಂದು ಹೇಳಿದ್ದಾರೆ.
ನಮ್ಮ ಶಾಸಕರೊಂದಿಗೆ ನಾವು ಸಭೆಗಳನ್ನು ನಡೆಸುತ್ತಿದ್ದೇವೆ. ಸರ್ಕಾರ ರಚಿಸುವಲ್ಲಿ ನಮ್ಮ ಎನ್'ಸಿಪಿ ಪಕ್ಷ ಬಿಜೆಪಿ ಜೊತೆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Advertisement