ಕಾರ್ತಿಕ ಮಾಸದ ಕಡೆಯ ಸೋಮವಾರ: ಗುಜರಾತಿನಲ್ಲಿ ಜ್ಯೋತಿರ್ಲಿಂಗನ ದರ್ಶನ ಪಡೆದ ಎಚ್. ಡಿ. ದೇವೇಗೌಡ

ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ಜ್ಯೋತಿರ್ಲಿಂಗ ದರ್ಶನಕ್ಕಾಗಿ ದೇವೇಗೌಡರು ಗುಜರಾತ್‌ಗೆ ತೆರಳಿದ್ದಾರೆ.
ಎಚ್ ಡಿ ದೇವೇಗೌಡ ಹಾಗೂ ಅವರ ಕುಟುಂಬ ಸದಸ್ಯರು
ಎಚ್ ಡಿ ದೇವೇಗೌಡ ಹಾಗೂ ಅವರ ಕುಟುಂಬ ಸದಸ್ಯರು

ಗುಜರಾತ್: ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ರಾಜಕಾರಣಕ್ಕಷ್ಟೆ ಖ್ಯಾತಿ ಪಡೆದಿಲ್ಲ‌ ದೈವಭಕ್ತಿಗೂ ಹೆಸರಾಗಿದೆ. ಚುನಾವಣೆ ಬರಲಿ ಅಮವಾಸ್ಯೆ, ಹುಣ್ಣಿಮೆಯೇ ಇರಲಿ ದೇವಸ್ಥಾನ ಪೂಜೆ ಪುನಸ್ಕಾರ ಎಂದೆಲ್ಲ ಈ ಕುಟುಂಬ ದೇವರ ಮೊರೆ ಹೋಗುತ್ತಲೇ ಇರುತ್ತದೆ.

ಒಂದೊಂದು ಕೆಲಸ ಕಾರ್ಯಕ್ಕೂ ಒಬ್ಬೊಬ್ಬರು ಜ್ಯೋತಿಷಿಗಳು ಇವರಿಗೆ. ರಾಜಕೀಯಕ್ಕೊಬ್ಬರಾದರೆ ಆರೋಗ್ಯ ಕುಟುಂಬಕ್ಕೂ ಮತ್ತಿನ್ಯಾರೋ. ಜ್ಯೋತಿಷ್ಯ, ಮಂತ್ರ, ಹೋಮಹವನ, ಜಾತಕಕ್ಕಾಗಿ ಸ್ವಾಮೀಜಿಗಳನ್ನು ಕೇಳುವುದು, ದೇವರ ಅನುಗ್ರಹಕ್ಕಾಗಿ ದೇವೇಗೌಡರು ಅವರ ಮಕ್ಕಳು ಮೊಮ್ಮಕ್ಕಳು ಹೋಗದ ಸ್ಥಳವಿಲ್ಲ ಎನ್ನಬಹುದು.

ಇದೀಗ ಜ್ಯೋತಿರ್ಲಿಂಗ ದರ್ಶನಕ್ಕಾಗಿ ದೇವೇಗೌಡರು ಗುಜರಾತ್‌ಗೆ ತೆರಳಿದ್ದಾರೆ. ಕಾರ್ತಿಕ‌ ಮಾಸದ ಕಡೆಯ ಸೋಮವಾರ ಇಲ್ಲಿನ ಗಿರಿ ಸೋಮನಾಥ ಜಿಲ್ಲೆಯಲ್ಲಿರುವ ಜ್ಯೋತಿರ್ಲಿಂಗ ಶಿವನ ದರ್ಶನವನ್ನು ಪತ್ನಿ ಚೆನ್ನಮ್ಮ, ಪುತ್ರಿ ಅನುಸೂಯ ಸೇರಿದಂತೆ ಮತ್ತಿತರೊಡನೆ ಈಶ್ವರನ ದರ್ಶನ ಪಡೆದು ದೇವೇಗೌಡರು ಪುನೀತರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com