ಮುಂಬೈ: ಸತ್ಯಕ್ಕೆ ಜಯ ಸಿಕ್ಕಿದೆ, ನಾಳೆಯೇ ಮುಕ್ತ ಮತದಾನದ ಮೂಲಕ ಬಹುಮತ ಸಾಬೀತುಪಡಿಸಿ ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್ ಬಿಜೆಪಿ ಆಟವನ್ನು ಕೊನೆ ಮಾಡಿದೆ ಎಂದು ಎನ್ ಸಿಪಿ ಪ್ರತಿಕ್ರಿಯಿಸಿದೆ.
ಸತ್ಯಮೇವ ಜಯತೇ, ಬಿಜೆಪಿ ಆಟ ಕೊನೆ ಎಂದು ಎನ್ ಸಿಪಿ ವಕ್ತಾರ ನವಾಬ್ ಮಲಿಕ್ ಸುಪ್ರೀಂ ಕೋರ್ಟ್ ತೀರ್ಪು ಹೊರಬರುತ್ತಿದ್ದಂತೆ ಟ್ವೀಟ್ ಮಾಡಿದ್ದಾರೆ.
ಇನ್ನೊಂದೆಡೆ ಪ್ರತಿಕ್ರಿಯೆ ನೀಡಿರುವ ಶಿವಸೇನೆ, ಸತ್ಯಕ್ಕೆ ಜಯ ಸಿಕ್ಕಿದ್ದು ನ್ಯಾಯಾಲಯ ಬಹುಮತ ಸಾಬೀತುಪಡಿಸಲು 30 ಗಂಟೆ ಸಮಯಾವಕಾಶ ಕೊಟ್ಟಿದೆ, ನಾವು 30 ನಿಮಿಷದಲ್ಲಿ ಬಹುಮತ ಸಾಬೀತುಪಡಿಸುತ್ತೇವೆ ಎಂದರು.
Advertisement