ಸೆಕ್ಸ್​ಗೆ ಒಪ್ಪದಿದ್ದಾಗ ಚಿನ್ಮಯಾನಂದ್ ಸಂತ್ರಸ್ತೆ ಮೈಮೇಲಿನ ಬಟ್ಟೆಗಳನ್ನು ಹರಿಯುತ್ತಿದ್ದ: ಕೌನ್ಸಿಲ್

ಸೆಕ್ಸ್​ಗೆ ಒಪ್ಪದಿದ್ದಾಗ ಸಂತ್ರಸ್ತೆ ಮೈಮೇಲೆ ಧರಿಸಿದ್ದ ಬಟ್ಟೆಗಳನ್ನು ಚಿನ್ಮಯಾನಂದ್ ಹರಿದು ಹಾಕುತ್ತಿದ್ದರು ಎಂದು ಜಿಲ್ಲಾ ಸರ್ಕಾರಿ ವಕೀಲ ಅರ್ಜುನ್ ಸಿಂಗ್ ಕೋರ್ಟ್ ಗೆ ತಿಳಿಸಿದ್ದಾರೆ.
ಚಿನ್ಮಯಾನಂದ್-ಅತ್ಯಾಚಾರ ಸಂತ್ರಸ್ತೆ
ಚಿನ್ಮಯಾನಂದ್-ಅತ್ಯಾಚಾರ ಸಂತ್ರಸ್ತೆ

ಶಹಜಾನ್ ಪುರ್: ಸೆಕ್ಸ್​ಗೆ ಒಪ್ಪದಿದ್ದಾಗ ಸಂತ್ರಸ್ತೆ ಮೈಮೇಲೆ ಧರಿಸಿದ್ದ ಬಟ್ಟೆಗಳನ್ನು ಚಿನ್ಮಯಾನಂದ್ ಹರಿದು ಹಾಕುತ್ತಿದ್ದರು ಎಂದು ಜಿಲ್ಲಾ ಸರ್ಕಾರಿ ವಕೀಲ ಅರ್ಜುನ್ ಸಿಂಗ್ ಕೋರ್ಟ್ ಗೆ ತಿಳಿಸಿದ್ದಾರೆ. 

ಅತ್ಯಾಚಾರ ಆರೋಪ ಎದುರಿಸುತ್ತಿರುವ ಚಿನ್ಮಯಾನಂದ ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್ ಮುಂದೆ ಅರ್ಜುನ್ ಸಿಂಗ್, ಅತ್ಯಾಚಾರ ಸಂತ್ರಸ್ತೆ ಈ ಕುರಿತು ಹೇಳಿಕೆ ನೀಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಚಿನ್ಮಯಾನಂದ್ ಅವರ ದಿವ್ಯ ಧಾಮಕ್ಕೆ ಸಂತ್ರಸ್ತೆ ಬರುತ್ತಿದ್ದರು ಎಂದು ಭದ್ರತಾ ಸಿಬ್ಬಂದಿ ಹೇಳಿಕೆ ನೀಡಿದ್ದು ಈ ಬಗ್ಗೆ ಎಸ್ಐಟಿ ದಾಖಲೆಗಳನ್ನು ಸಲ್ಲಿಸಿವೆ ಎಂದು ತಿಳಿಸಿದರು.

ಇದೇ ವೇಳೆ ಚಿನ್ಮಯಾನಂದ್ ಅವರಿಗೆ ಜಾಮೀನು ನೀಡದಂತೆ ಅರ್ಜುನ್ ಸಿಂಗ್ ಮನವಿ ಮಾಡಿದರು. ಸಂತ್ರಸ್ತೆ ಮೇಲೆ ಚಿನ್ಮಯಾನಂದ್ ಹಲವು ಬಾರಿ ಅತ್ಯಾಚಾರ ನಡೆಸಿದ್ದಾರೆ. ಸೆಕ್ಸನ್ 161 ಹಾಗೂ 164ರ ಅಡಿಯಲ್ಲಿ ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. 

ಸಂತ್ರಸ್ತೆ ಎಲ್ಎಲ್ಎಂ ಕಾಲೇಜಿನಲ್ಲಿ ವಿದ್ಯಾರ್ಥಿನಿಯಾಗಿದ್ದು ಅದೇ ಕಾಲೇಜಿನ ಕಂಪ್ಯೂಟರ್ ಲ್ಯಾಬ್ ನಲ್ಲಿ ಕೆಲಸವನ್ನೂ ಮಾಡುತ್ತಿದ್ದಾರೆ. ಆದರೆ ಆಕೆಯನ್ನು ಆಗಾಗ್ಗೆ ದಿನ ಧಾಮಕ್ಕೆ ಕರೆಸಿಕೊಳ್ಳಲಾಗುತ್ತಿತ್ತು. ದಿವ್ಯ ಧಾಮ ಶಿಕ್ಷಣ ಸಂಸ್ಥೆ ಅಲ್ಲ ಎಂದು ಅರುಣ್ ಸಿಂಗ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com