ಬಿಜೆಪಿ ಸಂಸದರಿಗೆ ಜನ ಉಗಿಯುತ್ತಿದ್ದಾರೆ ಎಂಬ ಪ್ರಕಾಶ್ ರೈ ಟೀಕೆ: ಕೇಂದ್ರದ ವಿರುದ್ಧ ಟೀಕೆ ಮೂರ್ಖತನ: ಸಿಟಿ ರವಿ

ಬಿಜೆಪಿ ವಕ್ತಾರ, ಸಚಿವ ಸಿ.ಟಿ.ರವಿ, ಪ್ರಕಾಶ್ ರೈ ಅವರಿಗೆ ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿಯೇ ಜನ ಚೆನ್ನಾಗಿ ಉಗಿದು ಕಳಿಸಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ಸಂಸದರಿಗೆ ಜನ ಉಗಿಯುತ್ತಿದ್ದಾರೆ ಎಂಬ ಪ್ರಕಾಶ್ ರೈ ಟೀಕೆ: ಕೇಂದ್ರದ ವಿರುದ್ಧ ಟೀಕೆ ಮೂರ್ಖತನ: ಸಿಟಿ ರವಿ
ಬಿಜೆಪಿ ಸಂಸದರಿಗೆ ಜನ ಉಗಿಯುತ್ತಿದ್ದಾರೆ ಎಂಬ ಪ್ರಕಾಶ್ ರೈ ಟೀಕೆ: ಕೇಂದ್ರದ ವಿರುದ್ಧ ಟೀಕೆ ಮೂರ್ಖತನ: ಸಿಟಿ ರವಿ

ಚಿಕ್ಕಬಳ್ಳಾಪುರ: ನೆರೆ ಸಂತ್ರಸ್ತರಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪರಿಹಾರ ನೀಡದ ಕಾರಣದಿಂದ ಸಂತ್ರಸ್ತರು ಬಿಜೆಪಿ ಸಂಸದರನ್ನು ಉಗಿಯುತ್ತಿದ್ದಾರೆ ಎಂಬ ನಟ ಪ್ರಕಾಶ್ ರೈ ಅವರನ್ನು ಟೀಕಿಸಿರುವ ಬಿಜೆಪಿ ವಕ್ತಾರ, ಸಚಿವ ಸಿ.ಟಿ.ರವಿ, ಪ್ರಕಾಶ್ ರೈ ಅವರಿಗೆ ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿಯೇ ಜನ ಚೆನ್ನಾಗಿ ಉಗಿದು ಕಳಿಸಿದ್ದಾರೆ ಎಂದು ಟೀಕಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕಾಶ್ ರೈ ಮಾಡಿರುವ ಟ್ವೀಟ್ ಅಭಿರುಚಿಯಿಂದ ಕೂಡಿಲ್ಲ. ಪ್ರಕಾಶ್ ರೈ ಅವರ ಚಲನಚಿತ್ರ ಯೋಗ್ಯತೆ ಬಗ್ಗೆ ಮಾತನಾಡುವುದಿಲ್ಲ. ಆದರೆ ಅವರ ರಾಜಕೀಯ ಯೋಗ್ಯತೆಗೆ ಜನ ಸರ್ಟಿಪಿಕೆಟ್ ಕೊಟ್ಟಿದ್ದಾರೆ. ನೆರೆ ಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಸ್ಪಂದಿಸಲ್ಲ ಎನ್ನುವುದು ಮೂರ್ಖತನವಾಗುತ್ತದೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com