ಇಸ್ರೋ ವಿಜ್ಞಾನಿ ಹತ್ಯೆಗೆ ಸಲಿಂಗಕಾಮ ಕಾರಣ!
ಇಸ್ರೋ ವಿಜ್ಞಾನಿ ಹತ್ಯೆಗೆ ಸಲಿಂಗಕಾಮ ಕಾರಣ!

ಇಸ್ರೋ ವಿಜ್ಞಾನಿ ಹತ್ಯೆಗೆ ಸಲಿಂಗಕಾಮ ಕಾರಣ!

 ಹೈದರಾಬಾದ್ ನಲ್ಲಿ ನಡೆದಿದ್ದ ಇಸ್ರೋ ವಿಜ್ಞಾನಿಯ ಹತ್ಯೆಗೆ ಸಲಿಂಗಕಾಮ ಕಾರಣ ಎಂಬ ಮಾಹಿತಿ ಬಹಿರಂಗವಾಗಿದೆ. 

ಹೈದರಾಬಾದ್: ಹೈದರಾಬಾದ್ ನಲ್ಲಿ ನಡೆದಿದ್ದ ಇಸ್ರೋ ವಿಜ್ಞಾನಿಯ ಹತ್ಯೆಗೆ ಸಲಿಂಗಕಾಮ ಕಾರಣ ಎಂಬ ಮಾಹಿತಿ ಬಹಿರಂಗವಾಗಿದೆ. 

ಅ.1 ರಂದು ಸುರೇಶ್ ಕುಮಾರ್ ಎಂಬ ವಿಜ್ಞಾನಿಯ ಶವ ಅಮೀರ್ ಪೇಟ್ ನಲ್ಲಿರುವ ತನ್ನ ಫ್ಲ್ಯಾಟ್ ನಲ್ಲಿ ಪತ್ತೆಯಾಗಿತ್ತು. ಈ ಅನುಮಾನಾಸ್ಪದ ಸಾವಿನ ಬಗ್ಗೆ ತನಿಖೆ ನಡೆಸಿದ್ದ ಪೊಲೀಸರಿಗೆ ಸುಳಿವು ದೊರೆತಿದ್ದು, ಸಲಿಂಗ ಕಾಮ ವಿಜ್ಞಾನಿಯ ಹತ್ಯೆಗೆ ಕಾರಣ ಎಂಬುದು ಬಹಿರಂಗವಾಗಿದೆ. 

ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ (ಎನ್ಆರ್ಎಸ್ ಸಿ) ವಿಜ್ಞಾನಿ ಲ್ಯಾಬ್ ಟೆಕ್ನೀಷಿಯನ್ ಜೊತೆ ಲೈಂಗಿಕ ಸಂಬಂಧ ಹೊಂದಿದ್ದ. ಗೇ ಸೆಕ್ಸ್ ನಂತರ ಆತನಿಗೆ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಲ್ಯಾಬ್ ಟೆಕ್ನೀಷಿಯನ್ ವಿಜ್ಞಾನಿ ಎಸ್ ಸುರೇಶ್ ಕುಮಾರ್ ನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. 

39 ವರ್ಷದ ಲ್ಯಾಬ್ ಟೆಕ್ನೀಷಿಯನ್ ನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಹೇಳಿಕೆಯ ಪ್ರಕಾರ ಬಂಧಿತ ಆರೋಪಿ ಜಂಗಮ ಶ್ರೀನಿವಾಸ್ ವಿಜ್ಞಾನಿಯನ್ನು ಇರಿದು ಹತ್ಯೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.

Related Stories

No stories found.

Advertisement

X
Kannada Prabha
www.kannadaprabha.com