ನವದೆಹಲಿ: ರಾಷ್ಟ್ರೀಯ ನಾಗರಿಕರ ನೋಂದಣಿಯಲ್ಲಿ (ಎನ್ಆರ್ಸಿ) ಹೆಸರಿಸದ 19 ಲಕ್ಷ ಜನರ ಬಗ್ಗೆ ಸರ್ಕಾರ ತನ್ನ ಯೋಜನೆಯನ್ನು ಬಹಿರಂಗಪಡಿಸಬೇಕು ಎಂದು ರಾಜ್ಯಸಭಾ ಸಂಸದ ಮತ್ತು ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ ಸೋಮವಾರ ಆಗ್ರಹಿಸಿದ್ದಾರೆ.
ಚಿದಂಬರಂ ಪರವಾಗಿ ಅವರ ಕುಟುಂಬ ಸದಸ್ಯರು ಸರಣಿ ಟ್ವೀಟ್ಗಳನ್ನು ಪೋಸ್ಟ್ ಮಾಡಿದ್ದಾರೆ. ನನ್ನ ಪರವಾಗಿ ಈ ಕೆಳಗಿನಂತೆ ಟ್ವೀಟ್ ಮಾಡಲು ನಾನು ನನ್ನ ಕುಟುಂಬದವರನ್ನು ಕೇಳಿದ್ದೇನೆ: ಎನ್ಆರ್ಸಿ ಒಂದು ’ಕಾನೂನು ಪ್ರಕ್ರಿಯೆ’ ಆಗಿದ್ದರೆ, ನಾಗರಿಕರಲ್ಲದವರು ಎಂದು ಘೋಷಿಸಲ್ಪಟ್ಟ 19 ಲಕ್ಷ ಮಂದಿಯೊಂದಿಗೆ ಕಾನೂನು ಪ್ರಕ್ರಿಯೆಯು ಹೇಗೆ ವ್ಯವಹರಿಸುತ್ತದೆ? ” ಎಂದು ಚಿದಂಬರಂ ಟ್ವೀಟ್ ನಲ್ಲಿ ಪ್ರಶ್ನಿಸಿದ್ದಾರೆ.
Advertisement