ಮಹಾಬಲಿಪುರಂ ಶೃಂಗಸಭೆ: ಭಾರತ-ಚೀನಾ ನಿಯೋಗ ಮಟ್ಟದ ಮಾತುಕತೆ ಆರಂಭ

ಭಾರತ ಮತ್ತು ಚೀನಾ ನಡುವೆ ಬಹುನಿರೀಕ್ಷಿತ ನಿಯೋಗ ಮಟ್ಟದ ಮಾತುಕತೆ ಶನಿವಾರ ಇಲ್ಲಿ ಪ್ರಾರಂಭಗೊಂಡಿದೆ.
ಚೆನ್ನೈನಲ್ಲಿ ಪ್ರಧಾನಿ ಮೋದಿ ಹಾಗೂ ಚೀನಾ ಅಧ್ಯಕ್ಷ
ಚೆನ್ನೈನಲ್ಲಿ ಪ್ರಧಾನಿ ಮೋದಿ ಹಾಗೂ ಚೀನಾ ಅಧ್ಯಕ್ಷ

ಮಾಮಲ್ಲಾಪುರಂ: ಭಾರತ ಮತ್ತು ಚೀನಾ ನಡುವೆ ಬಹುನಿರೀಕ್ಷಿತ ನಿಯೋಗ ಮಟ್ಟದ ಮಾತುಕತೆ ಶನಿವಾರ ಇಲ್ಲಿ ಪ್ರಾರಂಭಗೊಂಡಿದೆ. 

ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್, ಎನ್‌ಎಸ್‌ಎ ಅಜಿತ್ ದೋವಲ್ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರು ಪ್ರಧಾನಮಂತ್ರಿಗಳಿಗೆ ಸಹಾಯ ಮಾಡುತ್ತಿದ್ದಾರೆ.

ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನೇತೃತ್ವದ ಚೀನಾದ ನಿಯೋಗಕ್ಕೆ ವಿದೇಶಾಂಗ ಸಚಿವ ವಾಂಗ್ ಯಿ ಸಹಾಯ ಮಾಡುತ್ತಿದ್ದಾರೆ.

ಚೀನಾದ ಕಮ್ಯುನಿಸ್ಟ್ ಪಕ್ಷದ ರಾಜಕೀಯ ಬ್ಯೂರೋದ ಪ್ರಬಲ ಸದಸ್ಯ ಡಿಂಗ್ ಕ್ಸುಯೆಸಿಯಾಂಗ್ ಸಹ ಅಧ್ಯಕ್ಷ ಕ್ಸಿ ಅವರ ನಿಯೋಗದ ಭಾಗವಾಗಿದ್ದಾರೆ.

ಕ್ಸಿಯ ಸಾಗರೋತ್ತರ ಭೇಟಿಯ ದಿನನಿತ್ಯದ ಸದಸ್ಯರೆಂದು ಪರಿಗಣಿಸಲ್ಪಟ್ಟ ಡಿಂಗ್ ಅವರು ಶಾಂಘೈ ಪ್ರದೇಶದಲ್ಲಿ ಪಕ್ಷದ ಮುಖ್ಯಸ್ಥರಾಗಿದ್ದಾಗ ಕ್ಸಿ ಜಿನ್‌ಪಿಂಗ್ ಅವರ ರಾಜಕೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

ಶುಕ್ರವಾರ ಮೋದಿ ಮತ್ತು ಚೀನಾದ ಅಧ್ಯಕ್ಷರು ಭೋಜನಕೂಟದಲ್ಲಿ ಎರಡನೇ ಅನೌಪಚಾರಿಕ ಶೃಂಗಸಭೆಯಲ್ಲಿ ಮಾತುಕತೆಗೆ ಚಾಲನೆ ನೀಡಲಾಯಿತು.

ಮುಂದಿನ ನಾಲ್ಕೈದು ವರ್ಷಗಳಲ್ಲಿ ಎಲ್ಲ ವಿಷಯಗಳ ಬಗ್ಗೆ ಪ್ರಧಾನ ಮಂತ್ರಿಯೊಂದಿಗೆ "ಬಹಳ ನಿಕಟವಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ" ಎಂದು ಅಧ್ಯಕ್ಷ ಕ್ಸಿ ಹೇಳಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಶುಕ್ರವಾರ ತಡರಾತ್ರಿ ಸುದ್ದಿಗಾರರಿಗೆ ತಿಳಿಸಿದರು."ಅವರು ಇತರ ಅಭಿವೃದ್ಧಿ ಆದ್ಯತೆಗಳ ಬಗ್ಗೆಯೂ ಮಾತನಾಡಿದರು" ಎಂದು ಅವರು ಹೇಳಿದರು.

ಪ್ರಧಾನಿ ಮೋದಿ ಮತ್ತು ಚೀನಾದ ಗೌರವಾನ್ವಿತ ಅತಿಥಿ (ಕ್ಸಿ ಜಿನ್‌ಪಿಂಗ್) ಅವರು "ವ್ಯಾಪಾರ ಪ್ರಮಾಣ ಮತ್ತು ವ್ಯಾಪಾರ ಮೌಲ್ಯವನ್ನು ಹೇಗೆ ಹೆಚ್ಚಿಸುವುದು" ಎಂಬ ವಿಷಯಗಳ ಬಗ್ಗೆಯೂ ಚರ್ಚಿಸಿದ್ದಾರೆ ಎಂದು ಗೋಖಲೆ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com