ಕೇಶವ್ ಪ್ರಸಾದ್ ಮೌರ್ಯ
ಕೇಶವ್ ಪ್ರಸಾದ್ ಮೌರ್ಯ

ಬಿಜೆಪಿಗೆ ಮತ ನೀಡುವುದೆಂದರೆ ಪಾಕ್ ಮೇಲೆ ಪರಮಾಣು ಬಾಂಬ್ ಎಸೆದಂತೆ: ಉತ್ತರ ಪ್ರದೇಶ ಡಿಸಿಎಂ ಮೌರ್ಯ

ಭಾರತೀಯ ಜನತಾ ಪಕ್ಷಕ್ಕೆ ಮತ ಹಾಕುವುದೆಂದರೆ "ಪಾಕಿಸ್ತಾನದ ಮೇಲೆ ಪರಮಾಣು ಬಾಂಬ್ ಹಾಕುವುದು" ಎಂದರ್ಥ- ಹೀಗೊಂದು ಹೇಳಿಕೆಯನ್ನು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ನಿಡಿದ್ದಾರೆ. 

ಥಾಣೆ: ಭಾರತೀಯ ಜನತಾ ಪಕ್ಷಕ್ಕೆ ಮತ ಹಾಕುವುದೆಂದರೆ "ಪಾಕಿಸ್ತಾನದ ಮೇಲೆ ಪರಮಾಣು ಬಾಂಬ್ ಹಾಕುವುದು" ಎಂದರ್ಥ- ಹೀಗೊಂದು ಹೇಳಿಕೆಯನ್ನು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ನಿಡಿದ್ದಾರೆ.

ಸಧ್ಯದಲ್ಲೇ ನಡೆಯಲಿರುವ ಮಹಾರಾಷ್ಟ್ರ, ಹರಿಯಾಣ ವಿಧಾನಸಭೆ ಚುನಾವಣೆಗಳು ಬಿಜೆಪಿಗೆ ನಿರ್ಣಾಯಕವಾಗಲಿದೆ., ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ತೆಗೆದು ಹಾಕಿದ ಬಳಿಕ ದೇಶದಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.

ಭಾನುವಾರ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮೀರಾ ಭಾಯಂದರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನರೇಂದ್ರ ಮೆಹ್ತಾ ಅವರ ಪರವಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದ್ದಾರೆ.

"ಕಮಲದ ಚಿಹ್ನೆ(ಬಿಜೆಪಿ)ಗೆ ಮತ ಹಾಕುವುದರಿಂದ ದ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ನರೇಂದ್ರ ಮೆಹ್ತಾ ಅವರಿಗೆ ಒಳಿತಾಗಲಿದೆ. ಇದರರ್ಥ  ಪಾಕಿಸ್ತಾನದ ಮೇಲೆ ಪರಮಾಣು ಬಾಂಬ್ ಬೀಳಲಿದೆ ಎಂದಾಗುತ್ತದೆ." ಮೌರ್ಯ ಹೇಳಿದ್ದಾರೆ.

"370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ದೇಶದಲ್ಲಿ ನಡೆಯುವ ಮೊದಲ ಚುನಾವಣೆ ಇದಾಗಿದೆ, ಆದ್ದರಿಂದ ಈ ಚುನಾವಣೆ ಅತಿ ಪ್ರಮುಖವಾಗಿದೆ.ಈ ಚುನಾವಣೆ ಫಲಿತಾಂಶಗಳು ಜನರ 'ರಾಷ್ಟ್ರ ಭಕ್ತಿ' (ದೇಶಭಕ್ತಿ) ಯನ್ನು ಬಿಂಬಿಸಲಿದೆ. ಹಾಗಾಗಿ ಪ್ರತಿಯೊಬ್ಬರೂ ಮತದಾನ ಮಾಡುವ ಮುನ್ನ "ಸರಿಯಾದ ಆಯ್ಕೆ"ಯನ್ನು ನೋಡಿ ಮತ ಹಾಕುವುದು ಅತಿ ಮುಖ್ಯ."ನೀವು ಹಾಕಿದ ಮತವು ನರೇಂದ್ರ ಮೆಹ್ತಾ ಅವರಿಗೆ ಮಾತ್ರ ಒಳಿತು ಮಾಡುವುದಲ್ಲದು ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಫಡ್ನವೀಸ್ ಅವರ ನಾಯಕತ್ವಕ್ಕೆ ಸಹ ಬೆಂಬಲವಾಗಿರಲಿದೆ." ಅವರು ಹೇಳಿದ್ದಾರೆ.

ಪ್ರತಿಪಕ್ಷಗಳನ್ನು ಪರೋಕ್ಷವಾಗಿ ಟೀಕಿಸಿದ ಮೌರ್ಯ "ಲಕ್ಷ್ಮಿ ದೇವಿಯು ಕೈ, ಬೈಸಿಕಲ್ ಅಥವಾ ಗಡಿಯಾರದ ಮೇಲೆ ಕುಳಿತುಕೊಳ್ಳುವುದಿಲ್ಲ ಆಕೆ ಕಮಲದ ಹೂವಿನ ಮೇಲೆ ಕುಳಿತುಕೊಳ್ಳುತ್ತಾಳೆ. ಇದು ಅಭಿವೃದ್ಧಿಯ ಸಂಕೇತವಾಗಿದೆ. " ಎಂದರು.

Related Stories

No stories found.

Advertisement

X
Kannada Prabha
www.kannadaprabha.com