ಬರೇಲಿ: ಮೃತಪಟ್ಟ ಹೆಣ್ಣುಮಗುವಿನ ಅಂತ್ಯಕ್ರಿಯೆ ಮಾಡಲು ತೆರಳಿದ್ದ ತಂದೆಗೆ ಅಚ್ಚರಿಯೊಂದು ಕಂಡ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಹಿತೇಶ್ ಕುಮಾರ್ ಪತ್ನಿಗೆ ಅವಧಿಗೂ ಮುನ್ನವೇ ಪ್ರವಸವಾಗಿತ್ತು. ಅವಧಿಗೂ ಮುನ್ನವೇ ಜನಿಸಿದ್ದರಿಂದ ಕೆಲವೇ ಗಂಟೆಗಳಲ್ಲಿ ಹೆಣ್ಣುಮಗು ಸಾವನ್ನಪ್ಪಿತು. ಮಗುವಿನ ಅಂತ್ಯಸಂಸ್ಕಾರಕ್ಕಾಗಿ ಗುಂಡಿ ತೆಗೆಯುತ್ತಿದ್ದಾಗ ಅಚ್ಚರಿಯೆಂಬಂತೆ ಮಣ್ಣಿನ ಮಡಿಕೆಯಲ್ಲಿಟ್ಟು ಮತ್ತೊಂದು ಹೆಣ್ಣುಮಗುವನ್ನು ಜೀವಂತವಾಗಿ ಹೂತಿರುವುದು ಬೆಳಕಿಗೆ ಬಂದಿದೆ.
ತಕ್ಷಣವೇ ಎಚ್ಚೆತ್ತ ಹಿತೇಶ್ ಕುಮಾರ್ ಮಗುವಿಗೆ ಆರೈಕೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದೃಷ್ಟವಶಾತ್ ಆ ಮಗು ಅಪಾಯದಿಂದ ಪಾರಾಗಿದ್ದು ಆರೋಗ್ಯವಾಗಿದೆ. ಪೊಲೀಸರು ಈ ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಮಗುವನ್ನು ಜೀವಂತವಾಗಿ ಹೂತಿಟ್ಟ ಪೋಷಕರಿಗಾಗಿ ಹುಡುಕಾಟ ನಡೆದಿದೆ.
Advertisement