ಮುಂಬೈ: ಮಹಾರಾಷ್ಟ್ರ - ಪಂಜಾಬ್ ಸಹಕಾರ (ಪಿಎಂಸಿ) ಬ್ಯಾಂಕ್ ಹಗರಣ ಮತ್ತೊಬ್ಬರನ್ನು ಬಲಿಪಡೆದುಕೊಂಡಿದೆ. ತೀವ್ರ ಬಿಕ್ಕಟ್ಟಿಗೆ ಒಳಗಾಗಿರುವ ಪಿಎಂಸಿ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದ ಮುಂಬೈ ಮೂಲದ ಮಹಿಳಾ ವೈದ್ಯರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೀಡಾದ ಸಂತ್ರಸ್ತೆಯನ್ನು ಡಾ. ನಿವೇದಿತಾ ಬಿಜ್ಲಾನಿ (39) ಎಂದು ಗುರುತಿಸಲಾಗಿದೆ.
ಪಿಎಂಸಿ ಠೇವಣಿದಾರ ಸಂಜಯ್ ಗುಲಾಟಿ ಆತ್ಮಹತ್ಯೆ ಮಾಡಿಕೊಂಡ ದಿನವೇ ಈ ಘಟನೆ ಬೆಳಕಿಗೆ ಬಂದಿರುವುದು ಗಮನಾರ್ಹ, ಪೊಲೀಸರ ಮಾಹಿತಿ ಪ್ರಕಾರ, ವೈದ್ಯಕೀಯ ಸ್ನಾತಕೋತ್ತರ ಪಡೆದಿರುವ ಬಿಜ್ಲಾನಿ ಸೋಮವಾರ ಸಂಜೆ ಸಬ್ ಅರ್ಬನ್ ವರ್ಸೋವಾ ಪ್ರದೇಶದ ನಿವಾಸದಲ್ಲಿ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಡಾ. ನಿವೇದಿತಾ ಬಿಜ್ಲಾನಿ ಪಿಎಂಸಿ ಬ್ಯಾಂಕಿನಲ್ಲಿ 1 ಕೋಟಿ ರೂ ಠೇವಣಿ ಇರಿಸಿದ್ದರು ಎಂದು ಆಕೆಯ ತಂದೆ ತಿಳಿಸಿದ್ದಾರೆ.
Advertisement