ಭಯಾನಕ ದೃಶ್ಯ: ಕಾರ್ಮಿಕನ  ಕುತ್ತಿಗೆ ಸುತ್ತಿಕೊಂಡ ಹೆಬ್ಬಾವು! ಮುಂದೆನಾಯ್ತು?ವಿಡಿಯೋ 

ಕೇರಳ ರಾಜ್ಯದ ತಿರುವನಂತಪುರಂನಲ್ಲಿ ಭಯಾನಕ ದೃಶ್ಯವಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೆಬ್ಬಾವು ಸುತ್ತಿಕೊಂಡ ವ್ಯಕ್ತಿ
ಹೆಬ್ಬಾವು ಸುತ್ತಿಕೊಂಡ ವ್ಯಕ್ತಿ

ತಿರುವನಂತಪುರ:  ಕೇರಳ ರಾಜ್ಯದ ತಿರುವನಂತಪುರಂನಲ್ಲಿ ಭಯಾನಕ ದೃಶ್ಯವಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹೆಬ್ಬಾವೊಂದು 58 ವರ್ಷದ ಕಾರ್ಮಿಕರೊಬ್ಬರ ಕುತ್ತಿಗೆಯನ್ನು ಬಿಗಿಯಾಗಿ ಸುತ್ತಿಕೊಂಡಿದ್ದು ಸ್ಥಳದಲ್ಲಿ ಕೆಲಕಾಲ ಆತಂಕದ ವಾತವಾರಣ ನಿರ್ಮಾಣವಾಗಿತ್ತು.ನಯ್ಯರ್ ಜಲಾಶಯದ ಬಳಿಯ ಸ್ಥಳೀಯ ಕಾಲೇಜೊಂದರ ಬಳಿ ಸ್ವಚ್ಛತಾ ಕಾರ್ಯ ವೇಳೆ ಈ ಘಟನೆ ನಡೆದಿದೆ.

ಭುವನಚಂದ್ರ ನಾಯರ್ ಮತ್ತಿತರರು ಸ್ವಚ್ಛತಾ ಕಾರ್ಯ ನಡೆಸುವಾಗ ಹೆಬ್ಬಾವೊಂದು ಅವರ ಕುತ್ತಿಗೆಗೆ ಸುತ್ತಿಕೊಂಡಿದೆ.ಇದರಿಂದಾಗಿ ಅವರ ಉಸಿರು ನಿಂತೇ ಹೋದ ಆಗಿತ್ತು. ನಂತರ ಕೂಡಲೇ ಅಲ್ಲಿಗೆ ಧಾವಿಸಿದ ಇಬ್ಬರು ಕಾರ್ಮಿಕರು ಹಾವನ್ನು ಕುತ್ತಿಗೆಯಿಂದ ಬಿಡಿಸುವ ಮೂಲಕ ಭುವನಚಂದ್ರ ನಾಯರ್ ಅವರನ್ನು ಸುರಕ್ಷಿತವಾಗಿ ಪ್ರಾಣಪಾಯದಿಂದ ಪಾರು ಮಾಡಿದ್ದಾರೆ. ನಂತರ ಆ ಹಾವನ್ನು ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿದ್ದು, ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com