ಚಂದೌಲಿ ಜಿಲ್ಲೆಗೆ ಮರುನಾಮಕರಣ ಪ್ರಕ್ರಿಯೆ: ದೀನದಯಾಳ್ ಹೆಸರಿಡುವ ಸಾಧ್ಯತೆ

ಕಳೆದ ವರ್ಷ ಅಲಹಾಬಾದ್ ಅನ್ನು ಪ್ರಯಾಗರಾಜ್ ಎಂದು ಮರುನಾಮಕರಣ ಮಾಡಿದ ನಂತರ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ಚಂದೌಲಿ ಜಿಲ್ಲೆಯ ಹೆಸರನ್ನು ಪಂಡಿತ್ ದೀನದಯಾಳ್ ನಗರ ಎಂದು ಬದಲಾಯಿಸುವ ಪ್ರಕ್ರಿಯೆಯಲ್ಲಿದೆ.
ಚಂದೌಲಿ ಜಿಲ್ಲೆಗೆ ಮರುನಾಮಕರಣ ಪ್ರಕ್ರಿಯೆ: ದೀನದಯಾಳ್ ಹೆಸರಿಡುವ ಸಾಧ್ಯತೆ
ಚಂದೌಲಿ ಜಿಲ್ಲೆಗೆ ಮರುನಾಮಕರಣ ಪ್ರಕ್ರಿಯೆ: ದೀನದಯಾಳ್ ಹೆಸರಿಡುವ ಸಾಧ್ಯತೆ

ಲಖನೌ: ಕಳೆದ ವರ್ಷ ಅಲಹಾಬಾದ್ ಅನ್ನು ಪ್ರಯಾಗರಾಜ್ ಎಂದು ಮರುನಾಮಕರಣ ಮಾಡಿದ ನಂತರ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ಚಂದೌಲಿ ಜಿಲ್ಲೆಯ ಹೆಸರನ್ನು ಪಂಡಿತ್ ದೀನದಯಾಳ್ ನಗರ ಎಂದು ಬದಲಾಯಿಸುವ ಪ್ರಕ್ರಿಯೆಯಲ್ಲಿದೆ.

ಈ ಕುರಿತು ಸಕಾರಾತ್ಮಕ ಪ್ರತಿಕ್ರಿಯೆಯನ್ನು ಕಳುಹಿಸಿರುವ ಚಂದೌಲಿ ಜಿಲ್ಲಾಡಳಿತದಿಂದ ರಾಜ್ಯ ಸರ್ಕಾರ ವರದಿ ಕೋರಿತ್ತು. ಚಂದೌಲಿಯ ಹೊಸ ವೈದ್ಯಕೀಯ ಕಾಲೇಜಿನ ಶಿಲಾನ್ಯಾಸ ಸಮಾರಂಭದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೊಸ ಜಿಲ್ಲೆಗಳ ಹೆಸರನ್ನು ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆಯಿದೆ ಎಂದು ಇಲ್ಲಿನ ಸರ್ಕಾರಿ ಮೂಲಗಳು ಗುರುವಾರ ಸುಳಿವು ನೀಡಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com