ಎದೆ ಝೆಲ್ಲೆನಿಸುವ ಘಟನೆ: ಸಿಂಹವಿದ್ದ ಜಾಗಕ್ಕೆ ಹಾರಿ ಮುಖಾಮುಖಿಯಾಗಿ ಕುಳಿತ ವ್ಯಕ್ತಿ!ಮುಂದೆನಾಯ್ತು ವಿಡಿಯೋ 

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಎದೆ ಝೆಲ್ಲೆನಿಸುವ ಘಟನೆಯೊಂದು ಇಂದು ನಡೆದಿದೆ. ಮೃಗಾಲಯದ ಸಿಂಹದ ಪಂಜರದೊಳಗೆ ಮಾನಸಿಕ ವ್ಯಕ್ತಿಯೊಬ್ಬ ಹಾರಿದ್ದಾನೆ. ನಂತರ ಅದರ ಬಳಿಗೆ ಹೋಗಿ ಮುಖಾಮುಖಿಯಾಗಿ ಕುಳಿತಿದ್ದಾನೆ.
ಸಿಂಹದೊಂದಿಗೆ ವ್ಯಕ್ತಿ
ಸಿಂಹದೊಂದಿಗೆ ವ್ಯಕ್ತಿ

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಎದೆ ಝೆಲ್ಲೆನಿಸುವ ಘಟನೆಯೊಂದು ಇಂದು ನಡೆದಿದೆ. ಮೃಗಾಲಯದ ಸಿಂಹದ ಪಂಜರದೊಳಗೆ ಮಾನಸಿಕ ವ್ಯಕ್ತಿಯೊಬ್ಬ ಹಾರಿದ್ದಾನೆ. ನಂತರ ಅದರ ಬಳಿಗೆ ಹೋಗಿ ಮುಖಾಮುಖಿಯಾಗಿ ಕುಳಿತಿದ್ದಾನೆ.

ಬಿಹಾರ ಮೂಲದ ರೆಹಾನ್ ಖಾನ್ (28) ಈ ರೀತಿಯ ಹುಚ್ಚು ಸಾಹಸ ಮಾಡಿದ್ದು, ಆತ ಮಾನಸಿಕ ಅಸ್ವಸ್ಥ ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮೃಗಾಲಯಕ್ಕೆ ಬಂದಿದ್ದ ರೆಹಾನ್ ಖಾನ್ ಸಿಂಹವಿದ್ದ ಜಾಗ ಪ್ರವೇಶಿಸಿದ್ದಾನೆ.  ಅಲ್ಲದೇ ಸಿಂಹದ ಎದುರಿಗೆ ಹೋಗಿ ಕುಳಿತಿದ್ದಾನೆ. ಹೀಗೆ ತನ್ನ ಹತ್ತಿರ ಬಂದ ರೆಹಾನ್ ನನ್ನು ಸಿಂಹ ಕೆಲ ಕಾಲ ದಿಟ್ಟಿಸಿ ನೋಡಿದೆ. ಅಷ್ಟೊತ್ತಿಗೆ ಆತನನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಿಂಹಕ್ಕೆ ಅರಿವಳಿಕೆ ನೀಡಿ ರೆಹಾನ್ ಖಾನ್ ನನ್ನು ರಕ್ಷಿಸಲಾಗಿದೆ. ಯಾವುದೇ ಅಪಾಯವಿಲ್ಲದೆ ಆಶ್ಚರ್ಯಕರ ರೀತಿಯಲ್ಲಿ ಆತನನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com