ಸಂಚಾರಿ ನಿಯಮ ಉಲ್ಲಂಘನೆ: ಪುದುಚೇರಿ ಸಿಎಂ - ಗವರ್ನರ್​ ನಡುವೆ ಟ್ವೀಟ್​ ವಾರ್, ಏಟು-ಎದಿರೇಟು!

ಸಂಚಾರಿ ನಿಯಮ ಉಲ್ಲಂಘಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪುದುಚೇರಿ ಮುಖ್ಯಮಂತ್ರಿ ವಿ​. ನಾರಾಯಣಸ್ವಾಮಿ ಮತ್ತು ಲೆಫ್ಟಿನೆಂಟ್ ಗವರ್ನರ್ ಕಿರಣ್​ ಬೇಡಿ ನಡುವೆ ಭಾನುವಾರ ಭರ್ಜರಿ ಟ್ವೀಟ್​ ವಾರ್ ನಡೆದಿದೆ.
ನಾರಾಯಣಸ್ವಾಮಿ - ಕಿರಣ್ ಬೇಡಿ
ನಾರಾಯಣಸ್ವಾಮಿ - ಕಿರಣ್ ಬೇಡಿ

ಪುದುಚೇರಿ: ಸಂಚಾರಿ ನಿಯಮ ಉಲ್ಲಂಘಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪುದುಚೇರಿ ಮುಖ್ಯಮಂತ್ರಿ ವಿ​. ನಾರಾಯಣಸ್ವಾಮಿ ಮತ್ತು ಲೆಫ್ಟಿನೆಂಟ್ ಗವರ್ನರ್ ಕಿರಣ್​ ಬೇಡಿ ನಡುವೆ ಭಾನುವಾರ ಭರ್ಜರಿ ಟ್ವೀಟ್​ ವಾರ್ ನಡೆದಿದೆ.

ಸಿಎಂ ನಾರಾಯಣಸ್ವಾಮಿ ಅವರು ಚುನಾವಣಾ ಪ್ರಚಾರದ ಬೈಕ್​ ರ‍್ಯಾಲಿ ವೇಳೆ ಹೆಲ್ಮೆಟ್ ಧರಿಸದೆ ಸಂಚಾರಿ ನಿಯಮ ಉಲ್ಲಂಘಿಸಿದ್ದಾರೆ ಎಂದು ಕಿರಣ್​ ಬೇಡಿ ಅವರು ಆರೋಪಿಸಿದರೆ, ಇನ್ನೊಬ್ಬರಿಗೆ ಬೋಧನೆ ಮಾಡುವ ಬದಲು ಅದನ್ನು ಅಳವಡಿಸಿಕೊಳ್ಳಿ ಎಂದು ಸಿಎಂ ತಿರುಗೇಟು ನೀಡಿದ್ದಾರೆ.

ಸಂಚಾರಿ ನಿಯಮ ಉಲ್ಲಂಘಿಸಿದ ಸಿಎಂ ನಾರಾಯಣಸ್ವಾಮಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕಿರಣ್​ ಬೇಡಿಯವರು ಪುದುಚೇರಿಯ ಪೊಲೀಸ್​ ಮಹಾ ನಿರ್ದೇಶಕರಾದ ಬಾಲಾಜಿ ಶ್ರೀವಾಸ್ತವ ಅವರಿಗೆ ಮನವಿ ಮಾಡಿದ್ದಾರೆ. ಸುಪ್ರೀಂಕೋರ್ಟ್​ ಹಾಗೂ ಮದ್ರಾಸ್​ ಹೈಕೋರ್ಟ್​ ಕಾಯಿದೆ ಬಗ್ಗೆ ಸ್ಪಷ್ಟವಾಗಿ ಹೇಳಿದ್ದರೂ ಸಿಎಂ ನಿಯಮ ಉಲ್ಲಂಘಿಸಿದ್ದಾರೆ ಎಂದು ಕಿರಣ್ ಬೇಡಿ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com