ಬಿಜೆಪಿ ಜೊತೆ ಕೈಜೋಡಿಸಿದರೆ ಸ್ವತಂತ್ರ ಶಾಸಕರಿಗೆ ಜನರು ಬೂಟ್ ನಲ್ಲಿ ಹೊಡೆಯುತ್ತಾರೆ: ಹೂಡಾ

ಹರಿಯಾಣದಲ್ಲಿ ಸ್ವತಂತ್ರ ಅಭ್ಯರ್ಥಿಗಳು ಬಿಜೆಪಿ ಜೊತೆಗೆ ಕೈಜೋಡಿಸಿದ್ದೇ ಆದರೆ, ಸಮಯ ಬಂದಾಗ ಜನರು ಬೂಟ್ ನಲ್ಲಿ ಹೊಡೆಯುತ್ತಾರೆಂದು ಕಾಂಗ್ರೆಸ್ ನಾಯಕ ದೀಪೇಂದರ್ ಸಿಂಗ್ ಹೂಡಾ ಶುಕ್ರವಾರ ಹೇಳಿದ್ದಾರೆ. 
ದೀಪೇಂದರ್ ಸಿಂಗ್ ಹೂಡಾ
ದೀಪೇಂದರ್ ಸಿಂಗ್ ಹೂಡಾ

ಚಂಡೀಗಢ: ಹರಿಯಾಣದಲ್ಲಿ ಸ್ವತಂತ್ರ ಅಭ್ಯರ್ಥಿಗಳು ಬಿಜೆಪಿ ಜೊತೆಗೆ ಕೈಜೋಡಿಸಿದ್ದೇ ಆದರೆ, ಸಮಯ ಬಂದಾಗ ಜನರು ಬೂಟ್ ನಲ್ಲಿ ಹೊಡೆಯುತ್ತಾರೆಂದು ಕಾಂಗ್ರೆಸ್ ನಾಯಕ ದೀಪೇಂದರ್ ಸಿಂಗ್ ಹೂಡಾ ಶುಕ್ರವಾರ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಖಟ್ಟರ್ ಸರ್ಕಾರದ ಭಾಗವಾಗಲು ಹೋಗುವ ಸ್ವತಂತ್ರ ಶಾಸಕರು ತಮ್ಮದೇ ರಾಜಕೀಯ ಸಮಾಧಿಯನ್ನು ತೋಡಿಕೊಳ್ಳುತ್ತಾರೆ. ಜನರ ವಿಶ್ವಾಸವನ್ನು ಮಾರಿದಂತಾಗುತ್ತದೆ. ಇಂತಹ ಕಾರ್ಯಕ್ಕೆ ಕೈಹಾಕುವ ನಾಯಕರನ್ನು ಜನರು ಎಂದಿಗೂ ಮರೆಯುವುದಿಲ್ಲ. ಸಮಯ ಬಂದಾಗ ಬೂಟ್ ನಲ್ಲಿ ಹೊಡೆಯುತ್ತಾರೆಂದು ಹೇಳಿದ್ದಾರೆ. 

ಹರಿಯಾಣ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ 40 ಸ್ಥಾನವನ್ನು ಗೆದ್ದಿದ್ದರೆ, ಕಾಂಗ್ರೆಸ್ 31 ಸ್ಥಾನಗಳನ್ನು ಗೆದ್ದಿದೆ. ಇನ್ನು ದುಶ್ಯಂತ್ ಚೌಟಾಲಾ ಅವರ ಜೆಜೆಪಿ ಪಕ್ಷ 10 ಸ್ಥಾನಗಳನ್ನು ಗೆದ್ದುಕೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com