ಐಎಸ್ ಪ್ರೇರಿತ ಭಯೋತ್ಪಾದಕ ಸಂಘಟನೆ ವಿರುದ್ದ ತನಿಖೆ; ತಮಿಳುನಾಡಿನಲ್ಲಿ ಹಲವಡೆ ಎನ್ ಐಎ ದಾಳಿ

ಇಸ್ಲಾಮಿಕ್ ಸ್ಟೇಟ್ ನಿಂದ ಪ್ರೇರಣೆ ಹೊಂದಿದ್ದ ಭಯೋತ್ಪಾದಕ ಗುಂಪಿನ ವಿರುದ್ದ ನಡೆಸಲಾಗುತ್ತಿರುವ ತನ್ನ ತನಿಖೆಯ ಭಾಗವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ-ಎನ್ ಐ ಎ ಗುರುವಾರ ತಮಿಳುನಾಡಿನ ಹಲವು ಸ್ಥಳಗಳಲ್ಲಿ ದಾಳಿ ನಡೆಸಿ ಶೋಧನೆ ನಡೆಸುತ್ತಿದೆ.  
ಐಎಸ್ ಪ್ರೇರಿತ ಭಯೋತ್ಪಾದಕ ಸಂಘಟನೆ ವಿರುದ್ದ ತನಿಖೆ; ತಮಿಳುನಾಡಿನಲ್ಲಿ ಹಲವಡೆ ಎನ್ ಐಎ ದಾಳಿ
ಐಎಸ್ ಪ್ರೇರಿತ ಭಯೋತ್ಪಾದಕ ಸಂಘಟನೆ ವಿರುದ್ದ ತನಿಖೆ; ತಮಿಳುನಾಡಿನಲ್ಲಿ ಹಲವಡೆ ಎನ್ ಐಎ ದಾಳಿ

ನಾಗಪಟ್ಟಣಂ: ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸುವ ಉದ್ದೇಶದಿಂದ ದೇಶದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಸಂಚು ರೂಪಿಸಿದ್ದ ಇಸ್ಲಾಮಿಕ್ ಸ್ಟೇಟ್ ನಿಂದ ಪ್ರೇರಣೆ ಹೊಂದಿದ್ದ ಭಯೋತ್ಪಾದಕ ಗುಂಪಿನ ವಿರುದ್ದ ನಡೆಸಲಾಗುತ್ತಿರುವ ತನ್ನ ತನಿಖೆಯ ಭಾಗವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ-ಎನ್ ಐ ಎ ಗುರುವಾರ ತಮಿಳುನಾಡಿನ ಹಲವು ಸ್ಥಳಗಳಲ್ಲಿ ದಾಳಿ ನಡೆಸಿ ಶೋಧನೆ ನಡೆಸುತ್ತಿದೆ.  

ಇಂದು ಬೆಳಗ್ಗೆ ದಾಳಿ ಹಾಗೂ ಶೋಧನೆಗಳು ಆರಂಭಗೊಂಡಿದ್ದು, ಕೊಯಮತ್ತೂರು ಜಿಲ್ಲೆಯ ಎರಡು ಸ್ಥಳಗಳು, ನಾಪಟ್ಟಣಂನ ಜಿಲ್ಲೆಯ ನಾಗೂರ್, ತೂತುಕುಡಿ ಜಿಲ್ಲೆಯ ಕಾಯಲ ಪಟ್ಟಿಣಂ ಹಾಗೂ ಶಿವಗಂಗಾ ಜಿಲ್ಲೆಯ ಇಳಿಯನಕುಡಿಯಲ್ಲಿ ದಾಳಿಗಳು ಮುಂದುವರಿದೆ ಎಂದು ಪ್ರಾಥಮಿಕ ವರದಿ ತಿಳಿಸಿವೆ. ತಮಿಳುನಾಡು ಮೂಲದ ತೀವ್ರವಾದಿ ಇಸ್ಲಾಮಿಕ್ ಸಂಘಟನೆ "ಅನ್ಸಾರುಲ್ಲಾ"ದ ಬಂಧಿತ   ವ್ಯಕ್ತಿಗಳೊಂದಿಗೆ ಸಂಬಂಧ ಹೊಂದಿದ್ದವರ ಮನೆಗಳ ದಾಳಿ ನಡೆಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com