ದೇಶ
ಮುಂಬೈನಲ್ಲಿ ಭಾರಿ ಮಳೆ: ಕರ್ತವ್ಯನಿರತ ಇಬ್ಬರು ಬಿಎಂಸಿ ಸಿಬ್ಬಂದಿ ಸಾವು
ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಮತ್ತೆ ಭಾರಿ ಮಳೆಯಾಗುತ್ತಿದ್ದು, ನೀರಿನಲ್ಲಿ ಕೊಚ್ಚಿಹೊಗಿ ಕರ್ತವ್ಯನಿರತ ಇಬ್ಬರು ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಪಿ) ಸಿಬ್ಬಂದಿ ಮೃತಪಟ್ಟಿರುವ ದಾರುಣ....
ಮುಂಬೈ: ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಮತ್ತೆ ಭಾರಿ ಮಳೆಯಾಗುತ್ತಿದ್ದು, ನೀರಿನಲ್ಲಿ ಕೊಚ್ಚಿಹೊಗಿ ಕರ್ತವ್ಯನಿರತ ಇಬ್ಬರು ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಪಿ) ಸಿಬ್ಬಂದಿ ಮೃತಪಟ್ಟಿರುವ ದಾರುಣ ಘಟನೆ ಪಶ್ಚಿಮ ಉಪನಗರದ ಗೊರೆಗಾಂವ್ ನಲ್ಲಿ ನಡೆದಿದೆ.
ನಿನ್ನೆ ಸಂಜೆ ಸಿದ್ಧಾರ್ಥ್ ನಗರದಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತರನ್ನು ವಿಜಯೇಂದ್ರ ಸರ್ದಾರ್ ಬಗ್ಡಿ(36) ಮತ್ತು ಜಗದೀಶ್ ಪರ್ಮಾರ್(54) ಎಂದು ಗುರುತಿಸಲಾಗಿದೆ.
ನೀರಿನಲ್ಲಿ ಕೊಚ್ಚಿಹೊಗಿದ್ದ ಈ ಇಬ್ಬರನ್ನು ಪತ್ತೆಹಚ್ಚಿ, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ದಾರಿ ಮಧ್ಯೆಯೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.