ಮುಂಬೈನಲ್ಲಿ ಭಾರಿ ಮಳೆ
ಮುಂಬೈನಲ್ಲಿ ಭಾರಿ ಮಳೆ

ಮುಂಬೈನಲ್ಲಿ ಭಾರಿ ಮಳೆ: ಕರ್ತವ್ಯನಿರತ ಇಬ್ಬರು ಬಿಎಂಸಿ ಸಿಬ್ಬಂದಿ ಸಾವು

ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಮತ್ತೆ ಭಾರಿ ಮಳೆಯಾಗುತ್ತಿದ್ದು, ನೀರಿನಲ್ಲಿ ಕೊಚ್ಚಿಹೊಗಿ ಕರ್ತವ್ಯನಿರತ ಇಬ್ಬರು ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಪಿ) ಸಿಬ್ಬಂದಿ ಮೃತಪಟ್ಟಿರುವ ದಾರುಣ....

ಮುಂಬೈ: ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಮತ್ತೆ ಭಾರಿ ಮಳೆಯಾಗುತ್ತಿದ್ದು, ನೀರಿನಲ್ಲಿ ಕೊಚ್ಚಿಹೊಗಿ ಕರ್ತವ್ಯನಿರತ ಇಬ್ಬರು ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಪಿ) ಸಿಬ್ಬಂದಿ ಮೃತಪಟ್ಟಿರುವ ದಾರುಣ ಘಟನೆ ಪಶ್ಚಿಮ ಉಪನಗರದ ಗೊರೆಗಾಂವ್ ನಲ್ಲಿ ನಡೆದಿದೆ.

ನಿನ್ನೆ ಸಂಜೆ ಸಿದ್ಧಾರ್ಥ್ ನಗರದಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತರನ್ನು ವಿಜಯೇಂದ್ರ ಸರ್ದಾರ್ ಬಗ್ಡಿ(36) ಮತ್ತು ಜಗದೀಶ್ ಪರ್ಮಾರ್(54) ಎಂದು ಗುರುತಿಸಲಾಗಿದೆ. 

ನೀರಿನಲ್ಲಿ ಕೊಚ್ಚಿಹೊಗಿದ್ದ ಈ ಇಬ್ಬರನ್ನು ಪತ್ತೆಹಚ್ಚಿ, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ದಾರಿ ಮಧ್ಯೆಯೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com