ಮುಂಬೈ: ಸಿಪಿಐ ನಾಯಕ ಗೋವಿಂದ ಪನ್ಸಾರೆ ಹತ್ಯೆ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (ಎಸ್ ಐಟಿ) 3 ಶಂಕಿತ ಆರೋಪಿಗಳನ್ನು ಬಂಧಿಸಿದೆ. ಈ ಪ್ರಕರಣದ ಸಂಬಂಧ ಬಂಧನಕ್ಕೊಳಗಾದವರ ಸಂಖ್ಯೆ ಈಗ 12 ಕ್ಕೆ ಏರಿಕೆಯಾಗಿದೆ.
ಸಚಿನ್ ಅಂಡೂರ್, ಅಮಿತ್ ಬದ್ದಿ, ಗಣೇಶ್ ಮಿಸ್ಕಿನ್ ಬಂಧಿತ ಮೂವರು ಆರೋಪಿಗಳಾಗಿದ್ದು ಪುಣೆ, ಮುಂಬೈ ನ ಜೈಲುಗಳಲ್ಲಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಸಿಪಿಐ(ಎಂ) ನಾಯಕ ಪನ್ಸಾರೆ ಅವರ ಮೇಲೆ 2015 ರ ಫೆ.16 ರಂದು ಕೊಲ್ಹಾಪುರದಲ್ಲಿ ಗುಂಡಿನ ದಾಳಿ ಮಾಡಲಾಗಿತ್ತು. ಫೆ.20 ರಂದು ಪನ್ಸಾರೆ ಸಾವನ್ನಪ್ಪಿದ್ದರು.
Advertisement