ಚೆನ್ನೈ: ತಲೆ ಮೇಲೆ ಎಐಎಡಿಎಂಕೆ ಬ್ಯಾನರ್ ಬಿದ್ದು ಯುವತಿ ಸಾವು 

ತಲೆ ಮೇಲೆ ಬ್ಯಾನರ್ ಬಿದ್ದು ಅಪಘಾತದಲ್ಲಿ ಯುವತಿ  ಮೃತಪಟ್ಟ ಘಟನೆ ತಮಿಳುನಾಡಿನ ಚೆನ್ನೈನ ಪಾಲಿಕರಣೈಯಲ್ಲಿ ನಡೆದಿದೆ. ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಎಐಎಡಿಎಂಕೆ ಕಾರ್ಯಕರ್ತನ ಮಗನ ಮದುವೆಗಾಗಿ ಅಳವಡಸಿದ್ದ ಬ್ಯಾನರ್ ಬಿದ್ದಿದೆ,
ಮೃತ ಯುವತಿ ಶುಭಶ್ರೀ
ಮೃತ ಯುವತಿ ಶುಭಶ್ರೀ

ಚೆನ್ನೈ:  ತಲೆ ಮೇಲೆ ಬ್ಯಾನರ್ ಬಿದ್ದು ಅಪಘಾತದಲ್ಲಿ ಯುವತಿ  ಮೃತಪಟ್ಟ ಘಟನೆ ತಮಿಳುನಾಡಿನ ಚೆನ್ನೈನ ಪಾಲಿಕರಣೈಯಲ್ಲಿ ನಡೆದಿದೆ.  ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಎಐಎಡಿಎಂಕೆ ಕಾರ್ಯಕರ್ತನ ಮಗನ ಮದುವೆಗಾಗಿ ಅಳವಡಸಿದ್ದ ಬ್ಯಾನರ್ ಬಿದ್ದಿದೆ.

ಶುಭಶ್ರೀ (23) ಮೃತಪಟ್ಟ ಯುವತಿ. ಶುಭಶ್ರೀ  ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಎಐಎಡಿಎಂಕೆ ಕಾರ್ಯಕರ್ತನ ಮಗನ ಮದುವೆಗಾಗಿ ಅಳವಡಸಿದ್ದ ಬ್ಯಾನರ್ ಬಿದ್ದಿದೆ, ಪರಿಣಾಮ  ಶುಭಶ್ರೀ ಗಾಯಗೊಂಡು ಕೆಳಗೆ ಬಿದ್ದಿದ್ದಾಳೆ. ಇದೇ ವೇಳೆ ಹಿಂಬದಿಯಿಂದ ಲಾರಿಯೊಂದು ಯುವತಿಯ ಮೇಲೆ ಹರಿದು ಹೋಗಿದೆ.

ಈ ಅಪಘಾತದಲ್ಲಿ ಶುಭಾಶ್ರೀ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆಸ್ಪತ್ರೆಗೆ ಹೋಗುವಷ್ಟರಲ್ಲಿ ಶುಭಶ್ರೀ ಮೃತಪಟ್ಟಿದ್ದಾಳೆ ಎಂದು ಪೊಲಿಸರು ತಿಳಿಸಿದ್ದಾರೆ.

ಶುಭಶ್ರೀ ಬಿಟೆಕ್ ಪದವೀಧರೆಯಾಗಿದ್ದು, ತನ್ನ ಪರೀಕ್ಷೆ ಮುಗಿಸಿ ವಾಪಸ್ ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com