'ಅಂಗಲಾಚಿ ಬೇಡಿಕೊಂಡರು ಬಿಡದ ಕಾಮಾಂಧರು' ಅರ್ಧ ಕಿ.ಮೀ ಬೆತ್ತಲಾಗಿ ಓಡಿದ ಬಾಲಕಿ, ಹೀನ ಕೃತ್ಯ!

ಬಾಲಕಿಯೊಬ್ಬಳು ಅತ್ಯಾಚಾರಿಗಳಿಂದ ತಪ್ಪಿಸಿಕೊಳ್ಳಲು ಅರ್ಧ ಕಿ.ಮೀ ದೂರು ಬೆತ್ತಲಾಗಿ ಓಡಿರುವ ಅಮಾನವೀಯ ಘಟನೆ ಬಿಲ್ ವಾರಾದಲ್ಲಿ ನಡೆದಿದೆ.
ಅತ್ಯಾಚಾರ
ಅತ್ಯಾಚಾರ

ಜೈಪುರ: ಬಾಲಕಿಯೊಬ್ಬಳು ಅತ್ಯಾಚಾರಿಗಳಿಂದ ತಪ್ಪಿಸಿಕೊಳ್ಳಲು ಅರ್ಧ ಕಿ.ಮೀ ದೂರು ಬೆತ್ತಲಾಗಿ ಓಡಿರುವ ಅಮಾನವೀಯ ಘಟನೆ ಬಿಲ್ ವಾರಾದಲ್ಲಿ ನಡೆದಿದೆ.

ಸಂತ್ರಸ್ತ ಬಾಲಕಿ ತನ್ನ ಸಹೋದರನ ಜೊತೆ ಬಿಲ್ವಾರಾದ ದೇವಸ್ಥಾನದ ಜಾತ್ರೆಗೆ ತೆರಳಿದ್ದಳು. ಆಗ ಮೂವರು ಯುವಕರು ಆಕೆಯನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ಹೆದರಿದ ಬಾಲಕ ಅಲ್ಲಿಂದ ಓಡಿ ಹೋಗಿದ್ದಾನೆ. ಬಾಲಕಿಯನ್ನು ಅಪಹರಿಸಿದ ಮೂವರು ಕಾಮಾಂಧರು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. 

ಇನ್ನು ಓಡಿ ಹೋಗಿದ್ದ ಬಾಲಕ ಮಾರ್ಕೆಟ್ ವೊಂದಕ್ಕೆ ತೆರಳಿ ಅಲ್ಲಿ ಅಂಗಡಿಯವರಿಗೆ ವಿಷಯ ಮುಟ್ಟಿಸಿ ರಕ್ಷಿಸುವಂತೆ ಬೇಡಿಕೊಂಡಿದ್ದಾನೆ. ಕೂಡಲೇ ಮಾಲೀಕ ಬಾಲಕನೊಂದಿಗೆ ಸ್ಥಳಕ್ಕೆ ತೆರಳುತ್ತಿದ್ದಂತೆ ಮೂವರು ಕಾಮಾಂಧರು ಅಲ್ಲಿಂದ ಪರಾರಿಯಾಗಿದ್ದಾರೆ. 

ಕಾಮಾಂಧರ ಚಿತ್ರಹಿಂಸೆಯಿಂದ ಆಘಾತಗೊಂಡಿದ್ದ ಬಾಲಕಿ ಅಂಗಡಿ ಮಾಲೀಕನನ್ನು ನೋಡುತ್ತಿದ್ದಂತೆ ಹೆದರಿ ನಗ್ನವಾಗಿಯೇ ಓಡಲು ಶುರು ಮಾಡಿದ್ದಾಳೆ. ಅರ್ಧ ಕಿ.ಮೀ ಓಡಿದ ಬಾಲಕಿ ಕೊನೆಗೆ ಮಾಲೀಕ ನೀಡಿದ ಬಟ್ಟೆಯನ್ನು ಧರಿಸಿದ್ದಾಳೆ. 

ಈ ಸಂಬಂಧ ಮೂವರ ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ಅಪರಾಧ ಮತ್ತು ಪರಿಶಿಷ್ಟ ಜಾತಿ ವಿರುದ್ಧದ ದೌರ್ಜನ್ಯದ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಮೂವರು ಅತ್ಯಾಚಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com