ಮಧ್ಯಪ್ರದೇಶ: ತಮ್ಮನನ್ನು ಕಲ್ಲಿನಿಂದ ಹೊಡೆದು ಕೊಂದ 17 ವರ್ಷದ ಬಾಲಕ! 

17 ವರ್ಷದ ಬಾಲಕ 14 ವರ್ಷದ ತನ್ನ ತಮ್ಮನನ್ನು ಹತ್ಯೆ ಮಾಡಿರುವ ಅಮಾನುಷ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 
ಮಧ್ಯಪ್ರದೇಶ: ತಮ್ಮನನ್ನು ಕಲ್ಲಿನಿಂದ ಹೊಡೆದು ಕೊಂದ 17 ವರ್ಷದ ಬಾಲಕ!
ಮಧ್ಯಪ್ರದೇಶ: ತಮ್ಮನನ್ನು ಕಲ್ಲಿನಿಂದ ಹೊಡೆದು ಕೊಂದ 17 ವರ್ಷದ ಬಾಲಕ!

ಭೋಪಾಲ್: 17 ವರ್ಷದ ಬಾಲಕ 14 ವರ್ಷದ ತನ್ನ ತಮ್ಮನನ್ನು ಹತ್ಯೆ ಮಾಡಿರುವ ಅಮಾನುಷ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 

10 ರೂಪಾಯಿ ಪಾಕೆಟ್ ಮನಿ ಈ ಹತ್ಯೆಗೆ ಕಾರಣ ಎಂದು ತಿಳಿದುಬಂದಿದೆ. ಬುಡಕಟ್ಟು ಜನರು ಹೆಚ್ಚಾಗಿರುವ ಮೆಹಂದಿವಾನಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 

14 ವರ್ಷದ ಕಿರಿಯ ಮಗ ಉಮೇಶ್ ಗೆ ತಂದೆ 10 ರೂಪಾಯಿ ಪಾಕೆಟ್ ಮನಿ ನೀಡಿದ್ದರು, ಆದರೆ ಹಿರಿಯ ಮಗ ರಮೇಶ್ ಗೆ ಏನನ್ನೂ ನೀಡಿರಲಿಲ್ಲ. ಇದರಿಂದ ಆಕ್ರೋಶಗೊಂಡ ರಮೇಶ್ ತನ್ನ ಸಹೋದರನನ್ನು ಹತ್ಯೆ ಮಾಡಿದ್ದಾನೆ. 

ಮೊದಲು ವಾಗ್ವಾದದಲ್ಲಿ ಆರಂಭಗೊಂಡ ಕಲಹ ನಂತರದಲ್ಲಿ ಮಾರಣಾಂತಿಕ ಹಲ್ಲೆಗೆ ತಿರುಗಿತ್ತು. ಹತಾಶನಾದ ರಮೇಶ್ ತನ್ನ ಸಹೋದರ ಉಮೇಶ್ ನನ್ನು ಕಲ್ಲಿನಿಂದ ನಿರಂತರವಾಗಿ ಹೊಡೆದು ಹತ್ಯೆ ಮಾಡಿದ್ದಾನೆ. ನಂತರ ಬಂಧನದ ಭಯದಿಂದ ಹತ್ಯೆಗೆ ಉಪಯೋಗಿಸಿದ್ದ ಕಲ್ಲನ್ನು ಮರೆಮಾಚಿದ್ದು, ತಮ್ಮ ಮೃತದೇಹವನ್ನು ಪೊದೆಯೊಳಗೆ ಇಟ್ಟಿದ್ದ, ಭಾನುವಾರ ಬೆಳಿಗ್ಗೆ ಗ್ರಾಮಸ್ಥರು ಉಮೇಶ್ ಮೃತದೇಹವನ್ನು ಕಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com