ನವದೆಹಲಿ: ಐಎನ್ ಎಕ್ಸ್ ಮಾಧ್ಯಮ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರಿಗೆ ಇಂದು 74ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾರ್ತಿ ಚಿದಂಬರಂ ವಾಗ್ದಾಳಿ ನಡೆಸಿದ್ದಾರೆ.
' ಇಂದಿಗೆ ನಿಮ್ಮಗೆ 74 ವರ್ಷ, ನಂಬರ್ 56!!! ನಿಮ್ಮನ್ನು ತಡೆಯಲು ಸಾಧ್ಯವಿಲ್ಲ.ನಿಮ್ಮನ್ನು ನಾವು ಮಿಸ್ ಮಾಡಿಕೊಳ್ಳುತ್ತಿದ್ದೇವೆ.ನೀವು ಜೈಲಿನಿಂದ ಹೊರಬಂದು ನಮ್ಮೆಲ್ಲರೊಂದಿಗೆ ಕೇಕ್ ಕತ್ತರಿಸಬೇಕೆಂದು ಆಶಿಸುವುದಾಗಿ ಕಾರ್ತಿ ಚಿದಂಬರಂ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.
ನಿಮ್ಮ ಉತ್ಸಾಹ ಎಂತಹದ್ದು ಎಂಬುದು ಗೊತ್ತಿದೆ. ನಿಮ್ಮನ್ನು ನೋಡಲು ಕಾತುರರಿಂದ ಇರುವುದಾಗಿ ಹೇಳಿರುವ ಕಾರ್ತಿ, ಚಂದ್ರಯಾನ-2 ಸಂದರ್ಭದಲ್ಲಿ ನಾಟಕೀಯತೆ ಹೆಚ್ಚಾಗಿತ್ತು. ಲ್ಯಾಂಡರ್ ಸಂಪರ್ಕ ಕಳೆದುಕೊಂಡದ್ದು ನಾಟಕೀಯತೆ ಇಲ್ಲ. ತದನಂತರ ದೊಡ್ಡ ಡ್ರಾಮ ನಡೆಯಿತು ಎಂದಿದ್ದಾರೆ.
ಇಸ್ರೋ ಮುಖ್ಯಸ್ಥ ಡಾ. ಶಿವನ್ ಸೇರಿದಂತೆ ಕನ್ಯಾಕುಮಾರಿಯಿಂದ ಬಂದಿದ್ದ ನಮ್ಮ ಎಲ್ಲ ತಮಿಳಿಯನ್ನರು ಬೇಸರದಲ್ಲಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಹಿಡಿದು ಸಂತೈಯಿಸುವ ನಾಟಕವಾಡುತ್ತಿದ್ದರು ವಿಮಾನಯಾನ ಸಹಸ್ರಾರು ವರ್ಷಗಳ ಹಿಂದೆಯೇ ಸೃಷ್ಟಿಯಾಗಿದೆಯ ಇಸ್ರೋದಿಂದ ಈಗ ಸೃಷ್ಟಿಯಾಗಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ.
Advertisement