ನವದೆಹಲಿ: ಉಬರ್ ಕ್ಯಾಬ್ ಆ್ಯಪ್ನಲ್ಲಿ ದೋಷ ಪತ್ತೆ ಹಚ್ಚಿದ ಬೆಂಗಳೂರು ಟೆಕ್ಕಿಯೊಬ್ಬರಿಗೆ ಉಬರ್ ಸಂಸ್ಧೆ ಬರೋಬ್ಬರಿ 4.6 ಲಕ್ಷ ರೂ. ಬಹುಮಾನ ನೀಡಿದೆ.
ಬೆಂಗಳೂರು ಮೂಲದ ಸೈಬರ್ ಸೆಕ್ಯುರಿಟಿ ಸಂಶೋಧಕ ಆನಂದ್ ಪ್ರಕಾಶ್ ಉಬರ್ ಕ್ಯಾಬ್ ಆ್ಯಪ್ ನಲ್ಲಿ ದೋಷವೊಂದನ್ನು ಪತ್ತೆ ಹಚ್ಚಿದ್ದರು. ಅಲ್ಲದೆ ಈ ದೋಷದಿಂದ ಹ್ಯಾಕರ್ ಗಳು ಖಾತೆಯನ್ನು ವಶಪಡಿಸಬಹುದು ಮತ್ತು ಅವರ ನಿಯಂತ್ರಣದಲ್ಲಿರಿಸಬಹುದು ಎಂದು ಹೇಳಿದ್ದರು.
ಇದಕ್ಕೆ ಉಬರ್ ಕ್ಯಾಬ್ ಸಂಸ್ಧೆ ಆನಂದ್ ಪ್ರಕಾಶ್ ಅವರನ್ನು ಅಭಿನಂದಿಸಿದ್ದು ಅಲ್ಲದೆ ಜೊತೆಗೆ 4.6 ಲಕ್ಷ ರೂ. ಬಹುಮಾನ ನೀಡಿದೆ.
Advertisement