ರಾಜಸ್ಥಾನ: ಮಿತ್ರ ಪಕ್ಷ ಕಾಂಗ್ರೆಸ್ ನಿಂದ ಬಿಎಸ್ ಪಿ ಗೆ ಭಾರಿ ಅಘಾತ! 

ರಾಜಸ್ಥಾನದಲ್ಲಿ ಭಾರಿ ರಾಜಕೀಯ ಬೆಳವಣಿಗೆ ನಡೆದಿದ್ದು, ಸರ್ಕಾರ ರಚನೆಗೆ ಬೆಂಬಲ ನೀಡಿದ್ದ ಬಿಎಸ್ ಪಿಗೆ ಕಾಂಗ್ರೆಸ್ ಮರ್ಮಾಘತ ನೀಡಿದೆ. 
ರಾಜಸ್ಥಾನ: ಮಿತ್ರ ಪಕ್ಷ ಕಾಂಗ್ರೆಸ್ ಬಿಎಸ್ ಪಿ ಗೆ ಭಾರಿ ಅಘಾತ!
ರಾಜಸ್ಥಾನ: ಮಿತ್ರ ಪಕ್ಷ ಕಾಂಗ್ರೆಸ್ ಬಿಎಸ್ ಪಿ ಗೆ ಭಾರಿ ಅಘಾತ!

ಜೈಪುರ: ರಾಜಸ್ಥಾನದಲ್ಲಿ ಭಾರಿ ರಾಜಕೀಯ ಬೆಳವಣಿಗೆ ನಡೆದಿದ್ದು, ಸರ್ಕಾರ ರಚನೆಗೆ ಬೆಂಬಲ ನೀಡಿದ್ದ ಬಿಎಸ್ ಪಿಗೆ ಕಾಂಗ್ರೆಸ್ ಮರ್ಮಾಘತ ನೀಡಿದೆ. 

ಬಿಎಸ್ ಪಿಯ ಎಲ್ಲಾ 6 ಶಾಸಕರು ಕಾಂಗ್ರೆಸ್ ಗೆ ಸೇರ್ಪಡೆಯಾಗುವುದಾಗಿ ಘೋಷಿಸಿದ್ದು, ವಿಧಾನಸಭಾಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. 

ಸಿಪಿ ಜೋಷಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಬಿಎಸ್ ಪಿ ಶಾಸಕರು ತಮ್ಮನ್ನು ಭೇಟಿ ಮಾಡಿದ್ದು, ರಾಜೀನಾಮೆ ಪತ್ರ ನೀಡಿದ್ದಾರೆ. ಅಷ್ಟೇ ಅಲ್ಲದೇ ಬಿಎಸ್ ಪಿ ಶಾಸಕಾಂಗ ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನಗೊಳಿಸುತ್ತಿರುವುದಾಗಿ ಹೇಳಿದ್ದಾರೆಂದು ಮಾಹಿತಿ ನೀಡಿದ್ದಾರೆ. 

ಶಾಸಕರಾದ ರಾಜೇಂದ್ರ ಸಿಂಗ್ ಗುಧಾ, ಜೊಗೇಂದ್ರ ಸಿಂಗ್ ಅವಾನ, ವಜೀಬ್ ಅಲಿ, ಲಖನ್ ಸಿಂಗ್ ಮೀನಾ, ಸಂದೀಪ್ ಯಾದವ್ ಹಾಗೂ ದೀಪ್ ಚಂದ್ ರಾಜೀನಾಮೆ ನೀಡಿರುವ ಬಿಎಸ್ ಪಿ ಶಾಸಕರು. ಈ ಎಲ್ಲಾ ಶಾಸಕರು ಸಿಎಂ ಗೆಹ್ಲೋಟ್ ಜೊತೆ ನಿರಂತರ ಸಂಪರ್ಕದಲ್ಲಿದ್ದರು. ಕಾಂಗ್ರೆಸ್ ನಲ್ಲಿ 100 ಶಾಸಕರಿದ್ದರೆ ರಾಷ್ಟ್ರೀಯ ಲೋಕದಳದ ಓರ್ವ ಶಾಸಕನ ಬೆಂಬಲ ಕಾಂಗ್ರೆಸ್ ಸರ್ಕಾರಕ್ಕೆ ಇತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com