ನಾಗ್ಪುರ: ಚಿದಂಬರಂ ರಹಸ್ಯ ಬಯಲಾಗುವ ಭೀತಿಯಿಂದ ಸೋನಿಯಾ ಗಾಂಧಿ ಹಾಗೂ ಮನ್ ಮೋಹನ್ ಸಿಂಗ್ ಇಂದು ತಿಹಾರ್ ಜೈಲಿಗೆ ಭೇಟಿ ನೀಡಿ ಚಿದಂಬರಂ ಅವರನ್ನು ಭೇಟಿಯಾಗಿದ್ದಾರೆ ಎಂದು ಬಿಜೆಪಿ ಮುಖಂಡ ಹಾಗೂ ಮಹಾರಾಷ್ಟ್ರ ಹಣಕಾಸು ಸಚಿವ ಸುಧೀರ್ ಮುಂಗಂತಿವಾರ್ ಟೀಕಿಸಿದ್ದಾರೆ.
ತಮ್ಮ ರಹಸ್ಯಗಳನ್ನೆಲ್ಲಾ ಚಿದಂಬರಂ ಏಲ್ಲಿ ಬಾಯ್ಬಿಡುತ್ತಾರೋ ಎಂಬ ಆತಂಕದಿಂದ ಸೋನಿಯಾ ಗಾಂಧಿ ಹಾಗೂ ಮನ್ ಮೋಹನ್ ಸಿಂಗ್ ಜೈಲ್ಲಿನಲ್ಲಿರುವ ಚಿದಂಬರಂ ಅವರನ್ನು ಭೇಟಿಯಾಗಿದ್ದಾರೆ ಎಂದು ಸುದ್ದಿಸಂಸ್ಥೆಯೊಂದಕ್ಕೆ ಮುಂಗಂತಿವಾರ್ ಹೇಳಿದ್ದಾರೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು ಬೆಳಗ್ಗೆ ಸೋನಿಯಾ ಗಾಂಧಿ ಹಾಗೂ ಮನ್ ಮೋಹನ್ ಸಿಂಗ್ ಹಾಗೂ ಕಾರ್ತಿ ಚಿದಂಬರಂ ತಿಹಾರ್ ಜೈಲಿನಲ್ಲಿರುವ ಚಿದಂಬರಂ ಅವರನ್ನು ಭೇಟಿಯಾಗಿದ್ದರು.
ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಶಿವಸೇನಾ ಮೈತ್ರಿ ಮಾಡಿಕೊಳ್ಳಲಿದ್ದು, ಲೂಟಿ ಮಾಡಿರುವ ಕಾಂಗ್ರೆಸ್ ಹಾಗೂ ಎನ್ ಸಿಪಿ ಮೇಲೆ ಜನ ವಿಶ್ವಾಸ ಇಟ್ಟುಕೊಂಡಿಲ್ಲ ಎಂದಿದ್ದಾರೆ.
Advertisement