ಟೆಕ್ಕಿ ಶುಭಶ್ರೀ ಸಾವು ಪ್ರಕರಣ: ತಲೆಮರೆಸಿಕೊಂಡಿದ್ದ ಎಐಎಡಿಎಂಕೆ ನಾಯಕ ಜಯಗೋಪಾಲ್ ಅರೆಸ್ಟ್

ಮಹಿಳಾ ಟೆಕ್ಕಿಯ ಸಾವಿಗೆ ಕಾರಣವಾಗಿ ಬಳಿಕ ಎರಡು ವಾರಗಳ ಕಾಲ ತಲೆಮರೆಸಿಕೊಂಡಿದ್ದ ಸ್ಥಳೀಯ ಮಟ್ಟದ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ನಾಯಕನನ್ನು ಶುಕ್ರವಾರ ಬಂಧಿಸಲಾಯಿತು.
ಶುಭಶ್ರೀ
ಶುಭಶ್ರೀ

ಚೆನ್ನೈ: ಮಹಿಳಾ ಟೆಕ್ಕಿಯ ಸಾವಿಗೆ ಕಾರಣವಾಗಿ ಬಳಿಕ ಎರಡು ವಾರಗಳ ಕಾಲ ತಲೆಮರೆಸಿಕೊಂಡಿದ್ದ ಸ್ಥಳೀಯ ಮಟ್ಟದ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ನಾಯಕನನ್ನು ಶುಕ್ರವಾರ ಬಂಧಿಸಲಾಯಿತು. ಚೆನ್ನೈ ಉಪನಗರದಲ್ಲಿ ಹಾಕಲಾಗಿದ್ದ ಖಾಸಗಿ ಕಾರ್ಯಕ್ರಮದ ಹೋಲ್ಡಿಂಗ್ ಬಿದ್ದು ಮಹಿಲಾ ಟೆಕ್ಕಿ ಸಾವಿಗೀಡಾಗಿರುವ ಪ್ರಕರಣದಲ್ಲಿ ಈ ಬಂಧನ ಕಾರ್ಯಾಚರಣೆ ನಡೆದಿದೆ

ನರಹತ್ಯೆಗೆ ಯತ್ನಿಸಿದ ಆರೋಪದ ಮೇಲೆ ಅಪರಾಧಿ ಮಾಜಿ ಕೌನ್ಸಿಲರ್ ಜಯಗೋಪಾಲ್ ಅವರನ್ನು ಪಶ್ಚಿಮ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಬಂಧಿಸಲಾಗಿದೆ.

ಚೆನ್ನೈ ಉಪನಗರದಲ್ಲಿ ದ್ವಿಚಕ್ರ ವಾಹನವನ್ನು ಓಡಿಸುತ್ತಿದ್ದ 23 ವರ್ಷದ ಮಹಿಳಾ ಟೆಕ್ಕಿಯ ಮೇಲೆ ಹೋಲ್ಡಿಂಗ್ಸ್ ಬಿದ್ದು ದಾರುಣವಾಗಿ ಸಾವಿಗೀಡಾದ ಘಟನೆ ತಮಿಳುನಾಡಿನಾದ್ಯಂತ ತೀವ್ರ ಜನಾಕ್ರೋಶಕ್ಕೆ ಕಾರಣವಾಗಿತ್ತು.

ಮದ್ರಾಸ್ ಹೈಕೋರ್ಟ್ ಈ ಬಗ್ಗೆ ಗಂಭೀರ ಆದೇಶ ನಿಡಿದ್ದು ಜಯಗಪಾಲ್ ಅವರನ್ನು ಬಂಧಿಸುವಲ್ಲಿನ ವಿಳಂಬವನ್ನು ಪ್ರಶ್ನಿಸುವುದರ ಜೊತೆಗೆ ಇಂತಹ ಅಕ್ರಮ ಬ್ಯಾನರ್‌ಗಳ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com