
ಅಧಿಕಾರ ಸ್ವೀಕಸಿದ ಭಡೌರಿಯಾ
Stay up to date on all the latest ರಾಷ್ಟ್ರೀಯ news with The Kannadaprabha App. Download now
ಅಧಿಕಾರ ಸ್ವೀಕಸಿದ ಭಡೌರಿಯಾ
ನವದೆಹಲಿ: ಭಾರತೀಯ ವಾಯುಪಡೆಯ (ಐಎಎಫ್) ನೂತನ ಮುಖ್ಯಸ್ಥರಾಗಿ ಏರ್ ಚೀಫ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭಡೌರಿಯಾ ಅಧಿಕಾರ ಸೋಮವಾರ ಸ್ವೀಕರಿಸಿದರು.
Chief of Air Staff, Air Chief Marshal Rakesh Kumar Singh Bhadauria to ANI: Rafale combat aircraft will give India an edge over Pakistan and China. pic.twitter.com/LdBIFGPkWi
— ANI (@ANI) September 30, 2019
Delhi: Air Chief Marshal BS Dhanoa demits office of the Chief of Air Staff on superannuation; Air Marshal Rakesh Kumar Singh Bhadauria takes charge as the Chief of the Indian Air Force. pic.twitter.com/VknFnrbPuB
— ANI (@ANI) September 30, 2019
ನಿಕಟಪೂರ್ವ ಏರ್ಚೀಫ್ ಮಾರ್ಷಲ್ ಬಿ.ಎಸ್. ಧನೋವಾ ಅವರು ಸೋಮವಾರ ಭಡೌರಿಯಾ ಅವರಿಗೆ ಅಧಿಕೃತವಾಗಿ ಅಧಿಕಾರ ಹಸ್ತಾಂತರಿಸಿದರು. ಇನ್ನು ಅಧಿಕಾರ ಸ್ವೀಕರಿಸಿದ ಬಳಿಕ ಭಡೌರಿಯಾ ಅವರು, ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಿ ಗೌರವ ಸಲ್ಲಿಸಿದರು.
Delhi: Chief of Air Staff, Air Chief Marshal Rakesh Kumar Singh Bhadauria pays tribute at the National War Memorial after taking charge as the IAF Chief, today. pic.twitter.com/SjQfN43o8W
— ANI (@ANI) September 30, 2019
ಬಳಿಕ ಮಾತನಾಡಿದ ಭಡೌರಿಯಾ ಅವರು, ಪಾಕಿಸ್ತಾನ ಮತ್ತು ಚೀನಾ ವಿಚಾರವಾಗಿ ಭಾರತೀಯ ಸೇನೆಗೆ ರಫೆಲ್ ಯುದ್ಧ ವಿಮಾನ ಪ್ರಮುಖವಾಗುತ್ತದೆ. ರಫೆಲ್ ಮೂಲಕ ವಾಯುಸೇನೆಯ ಸಾಮರ್ಥ್ಯ ವೃದ್ಧಿಯಾಗಲಿದ್ದು, ರಫೆಲ್ ಗೇಮ್ ಚೇಂಜರ್ ಆಗಲಿದೆ ಎಂದು ಹೇಳಿದರು. ಅಂತೆಯೇ ಬಾಲಾಕೋಟ್ ನಲ್ಲಿ ನಡೆದ ರೀತಿಯ ಯಾವುದೇ ವಾಯುದಾಳಿಗಳ ನಡೆಸಲು ವಾಯುಸೇನೆ ಸರ್ವಸನ್ನದ್ಧವಾಗಿದೆ. ಮುಂದೆಯೂ ಕೂಡ ಸರ್ವ ಸನ್ನದ್ಧವಾಗಿಯೇ ಇರಲಿದೆ. ಯಾವುದೇ ರೀತಿಯ ಬಾಹ್ಯಾ ಬೆದರಿಕೆಗಳನ್ನು ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಭಡೌರಿಯಾ ಹೇಳಿದರು.
#WATCH IAF Chief Air Chief Marshal RKS Bhadauria on being asked if IAF is better prepared to carry out another Balakot like strike in future: We were prepared then, we will be prepared next time. We will be ready to face any challenge, any threat. pic.twitter.com/gMv6HpxJns
— ANI (@ANI) September 30, 2019
ಇದೇ ವೇಳೆ ಬಾಲಾಕೋಟ್ ಉಗ್ರ ಕ್ಯಾಂಪ್ ಗಳ ಕಾರ್ಯ ನಿರ್ವಹಣೆ ಕುರಿತು ಮಾತನಾಡಿದ ಅವರು, ನಮಗೆ ಈ ಕುರಿತಂತೆ ಮಾಹಿತಿ ಇದೆ. ಈ ಕುರಿತಂತೆ ಶೀಘ್ರದಲ್ಲೇ ಸೂಕ್ತ ನಿರ್ಣಯ ಕೈಗೊಳ್ಳುತ್ತೇವೆ ಎಂದು ಹೇಳುವ ಮೂಲಕ ಮತ್ತೊಂದು ವಾಯುದಾಳಿಯ ಪರೋಕ್ಷ ಎಚ್ಚರಿಕೆ ನೀಡಿದರು. ಇನ್ನು ಇತ್ತೀಚೆಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ವಿಶ್ವಸಂಸ್ಥೆಯಲ್ಲಿ ನೀಡಿದ್ದ ಪರಮಾಣು ದಾಳಿ ಕುರಿತು ಮಾತನಾಡಿದ ಭಡೌರಿಯಾ, ಅವರ ಭಾಷಣವೇ ಅಣ್ವಸ್ತ್ರ ಕುರಿತಂತೆ ಅವರ ನಿಲುವು ಸ್ಪಷ್ಟಪಡಿಸುತ್ತಿದೆ. ಆದರೆ ನಾವೂ ಕೂಡ ಯಾವುದೇ ರೀತಿಯ ಪರಿಸ್ಥಿತಿಗೆ ಸಿದ್ಧರಾಗಿದ್ದೇವೆ ಎಂದು ತಿರುಗೇಟು ನೀಡಿದರು.
ಇನ್ನು ವಾಯುಪಡೆ ಮುಖ್ಯಸ್ಥ ಸ್ಥಾನಕ್ಕೆ ಭಡೌರಿಯಾ ಅವರನ್ನು ಕೇಂದ್ರ ಸರ್ಕಾರ ಸೆಪ್ಟೆಂಬರ್ ಆರಂಭದಲ್ಲೇ ಆಯ್ಕೆ ಮಾಡಿತ್ತು. ಇಂದಿನಿಂದ ಎರಡು ವರ್ಷಗಳ ಅವಧಿಗೆ ಐಎಎಫ್ನ ಮುಖ್ಯಸ್ಥರಾಗಿ ಭಡೌರಿಯಾ ಕಾರ್ಯ ನಿರ್ವಹಿಸಲಿದ್ದಾರೆ.
ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ (ಎನ್ಡಿಎ) ಹಳೆಯ ವಿದ್ಯಾರ್ಥಿಯಾದ ಭಡೌರಿಯಾ, 26 ವಿವಿಧ ಬಗೆಯ ಯುದ್ದವಿಮಾನಗಳ ಹಾರಾಟ ನಡೆಸಿದ ಅನುಭವ ಹೊಂದಿದ್ದಾರೆ. ತಮ್ಮ ಸೇವಾ ಅವಧಿಯಲ್ಲಿ ಅವರು 4,250 ಗಂಟೆ ಯುದ್ದ ವಿಮಾನಗಳ ಹಾರಾಟ ನಡೆಸಿದ ಅನುಭವಗಳಿಸಿಕೊಂಡಿದ್ದಾರೆ. ವಾಯುಪಡೆಯ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿರುವ ಭಡೌರಿಯಾ, ಐಎಎಫ್ನ ಸದರನ್ ಏರ್ ಕಮಾಂಡ್ ಮುಖ್ಯಸ್ಥರಾಗಿ ಮಾರ್ಚ್ 2017 ರಿಂದ ಆಗಸ್ಟ್ 2018ರವರೆಗೆ ಕಾರ್ಯನಿರ್ವಹಿಸಿದ್ದರು. ನಂತರ ವಾಯುಪಡೆಯ ತರಬೇತಿ ಕಮಾಂಡ್ನ ಮುಖ್ಯಸ್ಥರಾಗಿ ಆಗಸ್ಟ್ನಿಂದ ಇಲ್ಲಿವರೆಗೆ ಕಾರ್ಯನಿರ್ವಹಿಸುತ್ತಿದ್ದರು.
ವಾಯುಪಡೆಯಲ್ಲಿ 39 ವರ್ಷ ಸೇವೆ ಸಲ್ಲಿಸಿರುವ ಬಧೌರಿಯಾ, ಅತಿ ವಿಶಿಷ್ಟ ಸೇವಾ ಪದಕ, ವಾಯು ಸೇನಾ ಪದಕ, ಪರಮ ವಿಶಿಷ್ಟ ಸೇವಾ ಪದಕಗಳನ್ನು ಪಡೆದಿದ್ದಾರೆ. ಈ ವರ್ಷದ ಜನವರಿಯಲ್ಲಿ ಭಡೌರಿಯಾ ಅವರನ್ನು ರಾಷ್ಟ್ರಪತಿಗಳ ಸಹಾಯಕ ಗೌರವಾಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು. ಐಎಎಫ್ಗೆ ಬತ್ತಳಿಕೆಗೆ ರಫೇಲ್ ಯುದ್ಧವಿಮಾನಗಳನ್ನು ಸೇರ್ಪಡೆಗೊಳಿಸುವಲ್ಲಿ ಭಡೌರಿಯಾ ಪ್ರಮುಖ ಪಾತ್ರ ವಹಿಸಿದ್ದಾರೆ
O
P
E
N
ಪೌರತ್ವ ಮಸೂದೆಗೆ ಸೇನಾ ಬೆಂಬಲ ಇಲ್ಲ, ದೇಶದ ಬಗ್ಗೆ ಬಿಜೆಪಿಗೆ ಮಾತ್ರ ಕಾಳಜಿ ಎಂಬುದು ಭ್ರಮೆ: ಠಾಕ್ರೆ
ಮಹಿಳೆಯರ ಮೇಲಿನ ಅಪರಾಧ ಕೇಸ್ ಗಳಲ್ಲಿ ಬಿಜೆಪಿ ಶಾಸಕರು ನಂಬರ್ 1, ಕಾಂಗ್ರೆಸ್ ನಂಬರ್ 2- ಎಡಿಆರ್
ಪೌರತ್ವ ಸಾಬೀತು ಪಡಿಸಲು ಯಾವುದೇ ದಾಖಲೆ ಸಲ್ಲಿಸುವುದಿಲ್ಲ: ಸಸಿಕಾಂತ್ ಸೆಂಥಿಲ್
ದಕ್ಷಿಣ ಏಷ್ಯನ್ ಕ್ರೀಡಾಕೂಟ: 300 ಪದಕ ಗೆದ್ದು ಭಾರತೀಯರ ಹೊಸ ದಾಖಲೆ!
ದಿ ಎಂಡ್..?; ತಿಹಾರ್ ಜೈಲಿಗೆ ನಿರ್ಭಯಾ ಆರೋಪಿಗಳ ರವಾನೆ, 10 ನೇಣು ಹಗ್ಗಗಳಿಗೆ ಆರ್ಡರ್!