ವಿಜಯವಾಡ: ಕೊರೋನಾ ವೈರಸ್ ನಿಂದಾಗಿ ಭಾರತವೇ ಥಂಡ ಹೊಡೆದು ಹೋಗಿದೆ. ಇನ್ನು ಸಮಾಜದ ರಕ್ಷಣೆಗೆ ನಿಂತಿರುವ ಪೊಲೀಸರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜನ್ಮ ಕೊಟ್ಟ ತಾಯಿಯ ಅಂತ್ಯಸಂಸ್ಕಾರಕ್ಕೂ ಹೋಗಲು ಸಾಧ್ಯವಾಗದೇ ತಮ್ಮನ್ನು ಕೆಲಸದಲ್ಲಿ ತೊಡಗಿಸಿಕೊಂಡು ತಾಯಿಗೆ ಅಂತಿಮ ಗೌರವ ಸಲ್ಲಿಸಿದ್ದಾರೆ.
ಸರ್ಕಾರಿ ರೈಲ್ವೆ ಪೊಲೀಸ್ ನಲ್ಲಿ ಸಬ್ ಇನ್ ಪೆಕ್ಟರ್ ಕೆ ಶಾಂತರಾಮ್ ಅವರು ತಾಯಿಯ ಅಂತ್ಯ ಸಂಸ್ಕಾರಕ್ಕೆ ಹೋಗಬೇಕಾ ಅಥವಾ ಇಂತಹ ಸಂದರ್ಭದಲ್ಲಿ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕಾ ಎಂದು ದ್ವಂದಕ್ಕೆ ಸಿಲುಕಿದ್ದಾರೆ. ಕೊನೆಗೆ ತನ್ನ ಸಮಾಜದ ಸೇವೆಯಲ್ಲೇ ತೊಡಗಿಕೊಂಡರು.
69 ವರ್ಷದ ಸೀತಾಮಹಾಲಕ್ಷ್ಮೀ ಅವರು ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದರು.
Advertisement